More

    ಡೆಂಘೆ ಜ್ವರಕ್ಕೆ ಗುಂಡ್ಲುಪೇಟೆ ಯುವಕ ಬಲಿ

    ಗುಂಡ್ಲುಪೇಟೆ: ತಾಲೂಕಿನ ಬೆರಟಹಳ್ಳಿ ಗ್ರಾಮದ ಯುವಕನೊಬ್ಬ ಡೆಂೆ ಜ್ವರದಿಂದ ಮಂಗಳವಾರ ಮೃತಪಟ್ಟಿದ್ದಾನೆ.

    ಗ್ರಾಮದ ಶಿವಮಲ್ಲಪ್ಪ ಎಂಬುವರ ಮಗ ಮಹದೇವಸ್ವಾಮಿ (30) ಮೃತರು. ಕಳೆದ ಹತ್ತು ವರ್ಷಗಳಿಂದ ಮೂರ್ಛೆ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದು ಒಂದು ತಿಂಗಳಿನಿಂದಲೂ ತೀವ್ರ ಜ್ವರದಿಂದ ಬಳಲುತ್ತಿದ್ದ ಇವರನ್ನು ಕಳೆದ ವಾರ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಜ್ವರ ನಿಯಂತ್ರಣಕ್ಕೆ ಬಾರದೆ ಚಿಕಿತ್ಸೆಗೆ ಸ್ಪಂದಿಸದೆ ಡೆಂೆಯಿಂದ ಮೃತಪಟ್ಟಿದ್ದಾರೆ.

    ತಾಲೂಕಿನಲ್ಲಿ ಎರಡನೇ ಪ್ರಕರಣ: ಕಳೆದ ಹದಿನೈದು ದಿನಗಳ ಹಿಂದೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಡೆಂೆ ಖಚಿತವಾಗಿದ್ದು ಸದ್ಯ ಆರೋಗ್ಯವಾಗಿದ್ದಾರೆ. ಪ್ರಕರಣ ಖಚಿತವಾಗುತ್ತಿದ್ದಂತೆ ಗ್ರಾಮದ ಎಲ್ಲ ಮನೆಗಳಲ್ಲಿಯೂ ನೀರನ್ನು ಹೊರ ಹಾಕಿ ಒಣದಿನ ಆಚರಿಸಲಾಗಿತ್ತು. ಇದೀಗ ಮಹದೇವಸ್ವಾಮಿ ಪ್ರಕರಣದಿಂದ ಬೆರಟಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸೊಳ್ಳೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts