More

    ಭರದಿಂದ ಸಾಗಿದ ಭಾವೈಕ್ಯ ಬ್ರಹ್ಮ ಸಿನಿಮಾ ಚಿತ್ರೀಕರಣ

    ಗುಡೂರ: ಸಮೀಪ ಕೆಲೂರ ಗ್ರಾಮದ ವೆಂಕಣ್ಣ ದೇಶಪಾಂಡೆ ಅವರ ಮನೆಯಲ್ಲಿ ಅಂಕಲಿ ಮಠದ ನಿರುಪಾದೀಶ್ವರರ ಜೀವನ ಚರಿತ್ರೆ ಆಧಾರಿತ ಭಾವೈಕ್ಯ ಬ್ರಹ್ಮ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ.

    ನಿರ್ಮಾಪಕ ವಿಜಯಕುಮಾರ ಗದ್ದಿ ಬೆಂಗಳೂರಿನ ಅಂಜನಾದ್ರಿ ಸಿನಿ ಪ್ರೋಡೆಕ್ಷನ್‌ನಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದು, ರಂಜೀತ್ ತಿಗಡಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿದ್ದನಕೊಳ್ಳದ ರಮಣೀಯ ಸ್ಥಳಗಳಲ್ಲಿ, ಸಿದ್ದೇಶ್ವರ ಮಠದಲ್ಲಿ ಚಿತ್ರೀಕರಣ ಪೂರ್ಣವಾಗಿದೆ. ಸದ್ಯ ಕೆಲೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ.

    ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ, ಮುಖ್ಯಪಾತ್ರದಲ್ಲಿ ಮಾ.ಆನಂದ, ಮೋಹಕ ತಾರೆ ನಯನಾ, ಪೋಷಕರ ಪಾತ್ರದಲ್ಲಿ ವಾಣಿಶ್ರೀ, ಸಹ ಪಾತ್ರದಲ್ಲಿ ನಟ ಸೂಳೇಭಾವಿಯ ಪ್ರವೀಣ ಪತ್ರಿ, ಶಿವಕುಮಾರ ಚಂಗಳಿ, ಪ್ರಕಾಶ ರೆಡ್ಡಿ, ನಟಿ ಅಪೂರ್ವ, ಮಂಜುನಾಥ ದೊಡಮನಿ, ಉಮೇಶ ಚಿಕ್ಕಣ್ಣ ಮತ್ತಿತರರು ನಟಿಸುತ್ತಿದ್ದಾರೆ. ಅಂಜನಪ್ಪ ನಿರುಪದಿ ಕವಿಗಳು ಚಿತ್ರಕಥೆ ಬರೆದಿದ್ದಾರೆ. ಸಿದ್ಧಾರ್ಥ ಭೈರವ ಛಾಯಾಗ್ರಹಣವಿದೆ ಎಂದು ಸ್ಥಳೀಯ ಕಲಾವಿದ ಮಹಾಂತೇಶ ಹಳ್ಳೂರ ತಿಳಿಸಿದರು.

    ಚಿತ್ರ ನಿರ್ದೇಶಕ ರಂಜೀತ್ ತಿಗಡಿ ಮಾತನಾಡಿ, ಮಹಾ ಅನ್ನದಾಸೋಹ ಮತ್ತು ಜ್ಞಾನ ದಾಸೋಹಕ್ಕೆ ಹೆಸರಾದ ಸಿದ್ದಗಂಗಾ ಶ್ರೀಮಠ ಹಾಗೂ ಅಂಕಲಿ ಮಠದ ನಿರುಪಾದಿ ಶ್ರೀಗಳ ಪವಾಡಗಳ ಮಹಿಮಾ ಶಕ್ತಿ ಈ ಚಿತ್ರದಲ್ಲಿದೆ ಎಂದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts