ವಿಜಯನಗರ: ಗಣ್ಯರ ಮಕ್ಕಳ ಮದುವೆ ಎಂದರೆ ಕಾರ್ಯಕ್ರಮದ ಮಟ್ಟ ದೊಡ್ಡದಾಗಿಯೆ ಇರುತ್ತೆ. ಇದೀಗ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪುತ್ರಿಯ ಅದ್ದೂರಿ ಆರತಕ್ಷತೆ ನಡೆಲಿದೆ. ಈ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ಕೂಡ ನಡೆದಿದೆ.
ಸಚಿವ ಆನಂದ್ ಸಿಂಗ್ ಮಗಳ ಆರತಕ್ಷತೆಗೆ ಗಣ್ಯಾತಿ ಗಣ್ಯರು, ಸಚಿವರು, ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ವಿಜಯನಗರದ ಹೊಸಪೇಟೆಯಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಅದ್ದೂರಿ ಸೆಟ್ ಹಾಕಾಲಗಿದೆ. ಹೀಗಾಗಿ ಹೊಸಪೇಟೆಗೆ ಸಚಿವರ ದಂಡೇ ಆಗಮಿಸಲಿದೆ.
ಆರತಕ್ಷತೆ ಸೆಟ್ಗೆ ಉತ್ತರ, ದಕ್ಷಿಣ ಭಾರತದ ಶೈಲಿಯ ವಾಸ್ತುಶಿಲ್ಪದ ಟಚ್ ನೀಡಲಾಗಿದೆ. ಈ ಸೆಟ್ನಲ್ಲಿ 200 ಅಡಿ ಉದ್ದದ, 75 ಅಡಿ ಅಗಲದ ವೇದಿಕೆ ನಿರ್ಮಾಣ ಮಾಡಲಾಗಿದೆ. ಅಂದಹಾಗೆ ಈ ಅದ್ದೂರಿ ಸೆಟ್ಅನ್ನು ಹೊಸಪೇಟೆಯ ಭಟ್ರಳ್ಳಿ ಆಂಜನೇಯ ದೇಗುಲದ ಬಳಿ ಹಾಕಲಾಗಿದೆ
ಆನಂದ್ ಸಿಂಗ್ ಮಗಳು ವೈಷ್ಣವಿ ಸಿಂಗ್ಗೆ ಮಧ್ಯಪ್ರದೇಶದ ಯಶರಾಜ್ ಸಿಂಗ್ ಜಾಧೋನ್ ಜತೆ ಜೈಪುರದಲ್ಲಿ ಇದೇ 5 ರಂದು ವಿವಾಹವಾಗಿದೆ. ಜೈಪುರದಲ್ಲಿ ವಿವಾಹವಾಗಿ ಕರ್ನಾಟಕದಲ್ಲಿ ಆರತಕ್ಷತೆ ಇಟ್ಟುಕೊಳ್ಳದಿದ್ದರೆ ಹೇಗೆ? ಹೀಗಾಗಿ ಅದ್ದೂರಿ ಸೆಟ್ ಹಾಕಲಾಗಿದ್ದು ಜೈಪುರದ ಕೋಟೆಯೇ ಹೊಸಕೋಟೆಯಲ್ಲಿ ಧರೆಗಿಳಿದಂತಿದೆ. ಈ ಕಾರ್ಯಕ್ರಮದಲ್ಲಿ 40 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎನ್ನುವ ಮಾಹಿತಿ ಕೂಡ ಹೊರಬಿದ್ದಿದೆ.