ಅಯೋಧ್ಯಾ: ಬರೋಬ್ಬರಿ 28 ವರ್ಷಗಳ ನಂತರ ಅಯೋಧ್ಯೆ ರಾಮಮಂದಿರದಲ್ಲಿ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಆ ವಿವಾದಿತ ಪ್ರದೇಶದಲ್ಲಿ ಯಾವುದೇ ಹಬ್ಬಗಳ ಆಚರಣೆಯೂ ಇರಲಿಲ್ಲ. ಆದರೆ ಈಗ ಅಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ದೀಪಾವಳಿ ಆಚರಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಇಷ್ಟು ವರ್ಷ ಇಡೀ ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆ ಇದ್ದರೂ ವಿವಾದಿತ ಪ್ರದೇಶವೆನಿಸಿಕೊಂಡಿದ್ದ ಬಾಬ್ರಿ ಮಸೀದಿ-ರಾಮಮಂದಿರ ಸ್ಥಳದಲ್ಲಿ ಇರಲಿಲ್ಲ. ಅಲ್ಲಿ ಯಾವುದೇ ಹಬ್ಬಗಳನ್ನೂ ಆಚರಿಸುವಂತೆ ಇರಲಿಲ್ಲ. ಇಷ್ಟು ವರ್ಷಗಳ ಕಾಲ ಒಂದು ಪುಟ್ಟ ಟೆಂಟ್ನಲ್ಲಿದ್ದ ಶ್ರೀರಾಮನ ವಿಗ್ರಹ ಇದೀಗ ತಾತ್ಕಾಲಿಕವಾಗಿ ಆವರಣಕ್ಕೆ ವರ್ಗಾವಣೆಯಾಗಿದೆ. ಅದೇ ಜಾಗದಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯೋಜನೆ ಹಾಕುತ್ತಿದ್ದಾರೆ.
ದೇವಾಲಯದ ಆವರಣದಲ್ಲಿ ಲಕ್ಷಾಂತರ ದೀಪಗಳು ದೀಪಾವಳಿಯಂದು ಬೆಳಗಲಿವೆ. ಅಷ್ಟೇ ಅಲ್ಲ, ಇಡೀ ಅಯೋಧ್ಯೆ, ಸರಯೂ ನದಿ ದಂಡ ದೀಪಗಳಿಂದ ಜಗಮಗಿಸಲಿದೆ.
ಅಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಥಮ ಆರತಿ ಬೆಳಗಲಿದ್ದಾರೆ. ಅದಾದ ಬಳಿಕ ದೀಪ ಬೆಳಗುವ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಲಿದೆ. 2020ರ ಆಗಸ್ಟ್ 5ರಂದು ಅಯೋಧ್ಯೆ ರಾಮಮಂದಿರಕ್ಕೆ ಭೂಮಿ ಪೂಜೆ ನಡೆದಿದೆ. ಅಂದು ಇಡೀ ಅಯೋಧ್ಯೆಯನ್ನು ಶೃಂಗರಿಸಲಾಗಿತ್ತು. ಸಾವಿರಾರು ದೀಪಗಳನ್ನು ಹಚ್ಚಿ, ಒಂದು ಸಣ್ಣ ಹಬ್ಬವನ್ನೇ ಆಚರಿಸಲಾಗಿತ್ತು. (ಏಜೆನ್ಸೀಸ್)
LIVE| ರಾಷ್ಟ್ರೀಯ ಏಕತಾ ದಿವಸ: ಸರ್ದಾರ್ ಪಟೇಲರ ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದ ಪ್ರಧಾನಿ