ಬೆಂಗಳೂರು : ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋತ್ ಅವರು ಇಂದು ರಾಜಭವನದಲ್ಲಿ ಉಪಯುಕ್ತ ಗಿಡಗಳನ್ನು ನೆಡುವ ಕಾರ್ಯ ಕೈಗೊಂಡರು. ಮಾವು ಮತ್ತು ತೆಂಗಿನ ಗಿಡಗಳನ್ನು ನೆಟ್ಟು ನೀರೆರೆದ ಗೆಹ್ಲೋತ್ ಅವರು, “ನಾವೆಲ್ಲರೂ ಆಗಿಂದಾಗ್ಗೆ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು” ಎಂದು ಕರೆ ನೀಡಿದರು.
ಗೆಹ್ಲೋತ್ ಅವರು ರಾಜಭವನದ ಅಂಗಳದಲ್ಲಿ ತಮ್ಮ ಅವಧಿಯಲ್ಲಿ ಮಾವು ಮತ್ತು ತೆಂಗಿನ ಗಿಡಗಳನ್ನು ನೆಟ್ಟು ಬೆಳೆಸಿ, ಹಣ್ಣಿನ ತೋಟ ನಿರ್ಮಾಣ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರೊಂದಿಗೆ, ರಾಜಭವನದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಗಿಡಗಳನ್ನು ನೆಟ್ಟರು.
ಒಂದು ಪ್ಲೇಟ್ಗೆ 15 ಸಾವಿರ ರೂಪಾಯಿ! ಇದು ಭೂಮಿಯ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್!