More

    ಕೇದಾರನಾಥದಲ್ಲಿ ಹೆಲಿಕಾಪ್ಟರ್​ ರೆಕ್ಕೆಗೆ ಸಿಲುಕಿ ಸರ್ಕಾರಿ ಅಧಿಕಾರಿ ದುರ್ಮರಣ…

    ರುದ್ರಪ್ರಯಾಗ: ಕೇದಾರನಾಥದಲ್ಲಿ ಹೆಲಿಕಾಪ್ಟರ್​ ಹಿಂಬದಿ ಇರುವ ಟೈಲ್ ರೋಟರ್‌ಗೆ ಸಿಲುಕಿ ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (ಯುಸಿಎಡಿಎ) ಅಧಿಕಾರಿ ಒಬ್ಬರು ಭಾನುವಾರ ಸಾವನ್ನಪ್ಪಿದ್ದಾರೆ.

    ಕೇದಾರನಾಥದ ಗರ್ವಾಲ್ ಮಂಡಲ್ ವಿಕಾಸ್ ನಿಗಮ್ (ಜಿಎಂವಿಎನ್) ಹೆಲಿಪ್ಯಾಡ್‌ನಲ್ಲಿ ಈ ಘಟನೆ ಸಂಭವಿಸಿರುವ ಬಗ್ಗೆ ರುದ್ರಪ್ರಯಾಗ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಶಾಖ ಅಶೋಕ್ ಭದನೆ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಸಿದ್ದರಾಮಯ್ಯಗೆ ವಾಯುಯಾನ ಕಂಟಕ?; ನಿನ್ನೆ ವಿಮಾನ, ಇಂದು ಹೆಲಿಕಾಪ್ಟರ್​ ಪ್ರಯಾಣದಲ್ಲಿ ಸಮಸ್ಯೆ!

    ಕುತ್ತಿಗೆಗೆ ಬಡಿಯಿತು ಹೆಲಿಕಾಪ್ಟರ್​ ರೆಕ್ಕೆ!

    ಹೆಲಿಕಾಪ್ಟರ್​ ನ ಟೈಲ್ ರೋಟರ್‌ಗೆ ಸಿಲುಕಿ ಅಮಿತ್ ಸೈನಿ ಅವರ ಕುತ್ತಿಗೆಗೆ ತೀವ್ರ ಗಾಯವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರ್ ದೀಕ್ಷಿತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಕಾಡಿನಲ್ಲಿದ್ದ ಹಸುಗಳನ್ನು ನಿರ್ನಾಮ ಮಾಡಲು ಹೆಲಿಕಾಪ್ಟರ್​ನಲ್ಲಿ ಶಾರ್ಪ್​ ಶೂಟರ್​​ಗಳನ್ನು ಕಳಿಸಿದರು!

    ಏಪ್ರಿಲ್ 25 ರಂದು ತೆರೆಯಲಿರುವ ದೇವಾಲಯಕ್ಕೆ ಹೆಲಿಕಾಪ್ಟರ್​ ಸೇವೆಗಳ ವ್ಯವಸ್ಥೆಯನ್ನು ಪರಿಶೀಲಿಸಲು ಹೆಲಿಪ್ಯಾಡ್‌ಗೆ ಭೇಟಿ ನೀಡಿದ್ದ ಯುಸಿಎಡಿಎ ತಂಡದ ಭಾಗವಾಗಿ ಅಮಿತ್​ ಸೈನಿ ಇದ್ದರು. ಸದ್ಯ ಕೇದಾರನಾಥದಲ್ಲಿ ಸಾಮಾನ್ಯ ಹಿಮಪಾತ ಮುಂದುವರಿದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts