ರುದ್ರಪ್ರಯಾಗ: ಕೇದಾರನಾಥದಲ್ಲಿ ಹೆಲಿಕಾಪ್ಟರ್ ಹಿಂಬದಿ ಇರುವ ಟೈಲ್ ರೋಟರ್ಗೆ ಸಿಲುಕಿ ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (ಯುಸಿಎಡಿಎ) ಅಧಿಕಾರಿ ಒಬ್ಬರು ಭಾನುವಾರ ಸಾವನ್ನಪ್ಪಿದ್ದಾರೆ.
ಕೇದಾರನಾಥದ ಗರ್ವಾಲ್ ಮಂಡಲ್ ವಿಕಾಸ್ ನಿಗಮ್ (ಜಿಎಂವಿಎನ್) ಹೆಲಿಪ್ಯಾಡ್ನಲ್ಲಿ ಈ ಘಟನೆ ಸಂಭವಿಸಿರುವ ಬಗ್ಗೆ ರುದ್ರಪ್ರಯಾಗ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಶಾಖ ಅಶೋಕ್ ಭದನೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ವಾಯುಯಾನ ಕಂಟಕ?; ನಿನ್ನೆ ವಿಮಾನ, ಇಂದು ಹೆಲಿಕಾಪ್ಟರ್ ಪ್ರಯಾಣದಲ್ಲಿ ಸಮಸ್ಯೆ!
ಕುತ್ತಿಗೆಗೆ ಬಡಿಯಿತು ಹೆಲಿಕಾಪ್ಟರ್ ರೆಕ್ಕೆ!
ಹೆಲಿಕಾಪ್ಟರ್ ನ ಟೈಲ್ ರೋಟರ್ಗೆ ಸಿಲುಕಿ ಅಮಿತ್ ಸೈನಿ ಅವರ ಕುತ್ತಿಗೆಗೆ ತೀವ್ರ ಗಾಯವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರ್ ದೀಕ್ಷಿತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಡಿನಲ್ಲಿದ್ದ ಹಸುಗಳನ್ನು ನಿರ್ನಾಮ ಮಾಡಲು ಹೆಲಿಕಾಪ್ಟರ್ನಲ್ಲಿ ಶಾರ್ಪ್ ಶೂಟರ್ಗಳನ್ನು ಕಳಿಸಿದರು!
ಏಪ್ರಿಲ್ 25 ರಂದು ತೆರೆಯಲಿರುವ ದೇವಾಲಯಕ್ಕೆ ಹೆಲಿಕಾಪ್ಟರ್ ಸೇವೆಗಳ ವ್ಯವಸ್ಥೆಯನ್ನು ಪರಿಶೀಲಿಸಲು ಹೆಲಿಪ್ಯಾಡ್ಗೆ ಭೇಟಿ ನೀಡಿದ್ದ ಯುಸಿಎಡಿಎ ತಂಡದ ಭಾಗವಾಗಿ ಅಮಿತ್ ಸೈನಿ ಇದ್ದರು. ಸದ್ಯ ಕೇದಾರನಾಥದಲ್ಲಿ ಸಾಮಾನ್ಯ ಹಿಮಪಾತ ಮುಂದುವರಿದಿದೆ. (ಏಜೆನ್ಸೀಸ್)