ಚಿಕ್ಕಬಳ್ಳಾಪುರ: ಪ್ರೀತಿಸಿದ ಹುಡುಗಿಯ ಶೀಲದ ಬಗ್ಗೆ ಶಂಕೆಗೊಂಡ ಪ್ರಿಯತಮ ಆಕೆಗೆ ವಿಷ ಕುಡಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಕಮಲಾಪುರದಲ್ಲಿ ನಡೆದಿದೆ.
ವೆಂಕಟೇಶ್ ವಿಷ ಕುಡಿಸಿದ ಯುವಕ. ವಿಷ ಸೇವಿಸಿದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಗೌರಿಬಿದನೂರು ತಾಲೂಕಿನ ವೆಂಕಟೇಶ್ ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಸ್ವಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ವೆಂಕಟೇಶ್ ಇತ್ತೀಚೆಗೆ ಯುವತಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಜ.6ರಂದು ಇಬ್ಬರ ನಡುವೆ ಇದೆ ವಿಚಾರವಾಗಿ ಜಗಳ ನಡೆದಿತ್ತು. ವೆಂಕಟೇಶ್ ತಪ್ಪು ಮಾಡಿಲ್ಲ ಅಂದರೆ ವಿಷ ಕುಡಿದು ಸಾಬೀತುಪಡಿಸುವಂತೆ ಯುವತಿಗೆ ಸವಾಲು ಹಾಕಿದ್ದ. ವೆಂಕಟೇಶ್ ಮಾತಿಗೆ ಬದ್ಧಳಾದ ಯುವತಿ ವಿಷ ಕುಡಿದು ನೇರವಾಗಿ ಮನೆಗೆ ತೆರಳಿದಳು. ಮನೆಯಲ್ಲಿ ಕುಸಿದು ಬಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಜ.8ರಂದು ಮೃತಪಟ್ಟಿದ್ದಳು. ಪಾಲಕರಿಗೆ ವೆಂಕಟೇಶ್ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದರು.
ಕೇಸು ದಾಖಲಿಸಿದ ಪೊಲೀಸರು ವೆಂಕಟೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡ. ವೆಂಕಟೇಶ್ ಆರಂಭದಲ್ಲಿ ಸತ್ಯ ಹೇಳಿರಲಿಲ್ಲ. ನಾನು ಕೂಡ ವಿಷ ಸೇವಿಸಿದ್ದೆ ನಂತರ ಚಿಕಿತ್ಸೆ ಪಡೆದಿದ್ದೇನೆ ಎಂದು ಸುಳ್ಳು ಹೇಳಿದ್ದ. (ದಿಗ್ವಿಜಯ ನ್ಯೂಸ್)