More

    ಶೀಲ ಶಂಕಿಸಿ ಪ್ರೀತಿಸಿದ ಯುವತಿಗೆ ವಿಷ ಕುಡಿಸಿದ ಪ್ರಿಯತಮ

     

    ಚಿಕ್ಕಬಳ್ಳಾಪುರ: ಪ್ರೀತಿಸಿದ ಹುಡುಗಿಯ ಶೀಲದ ಬಗ್ಗೆ ಶಂಕೆಗೊಂಡ ಪ್ರಿಯತಮ ಆಕೆಗೆ ವಿಷ ಕುಡಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಕಮಲಾಪುರದಲ್ಲಿ ನಡೆದಿದೆ.
    ವೆಂಕಟೇಶ್​ ವಿಷ ಕುಡಿಸಿದ ಯುವಕ. ವಿಷ ಸೇವಿಸಿದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
    ಗೌರಿಬಿದನೂರು ತಾಲೂಕಿನ ವೆಂಕಟೇಶ್​ ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಸ್ವಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ವೆಂಕಟೇಶ್​ ಇತ್ತೀಚೆಗೆ ಯುವತಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಜ.6ರಂದು ಇಬ್ಬರ ನಡುವೆ ಇದೆ ವಿಚಾರವಾಗಿ ಜಗಳ ನಡೆದಿತ್ತು. ವೆಂಕಟೇಶ್​ ತಪ್ಪು ಮಾಡಿಲ್ಲ ಅಂದರೆ ವಿಷ ಕುಡಿದು ಸಾಬೀತುಪಡಿಸುವಂತೆ ಯುವತಿಗೆ ಸವಾಲು ಹಾಕಿದ್ದ. ವೆಂಕಟೇಶ್​ ಮಾತಿಗೆ ಬದ್ಧಳಾದ ಯುವತಿ ವಿಷ ಕುಡಿದು ನೇರವಾಗಿ ಮನೆಗೆ ತೆರಳಿದಳು. ಮನೆಯಲ್ಲಿ ಕುಸಿದು ಬಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಜ.8ರಂದು ಮೃತಪಟ್ಟಿದ್ದಳು. ಪಾಲಕರಿಗೆ ವೆಂಕಟೇಶ್​ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದರು.
    ಕೇಸು ದಾಖಲಿಸಿದ ಪೊಲೀಸರು ವೆಂಕಟೇಶ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡ. ವೆಂಕಟೇಶ್​ ಆರಂಭದಲ್ಲಿ ಸತ್ಯ ಹೇಳಿರಲಿಲ್ಲ. ನಾನು ಕೂಡ ವಿಷ ಸೇವಿಸಿದ್ದೆ ನಂತರ ಚಿಕಿತ್ಸೆ ಪಡೆದಿದ್ದೇನೆ ಎಂದು ಸುಳ್ಳು ಹೇಳಿದ್ದ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts