ಸಿಂಧನೂರು: ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಡಿ.19 ರಂದು ಆಚರಿಸಲಾಗುವುದು. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಾಚಾರ್ಯ ಪ್ರಹ್ಲಾದ ರಡ್ಡಿ ಕೋರಿದರು.
ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆಯಲ್ಲಿ ಭಾನುವಾರ ಮಾತನಾಡಿದರು. ಸುವರ್ಣ ಮಹೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಬೇಕಿದೆ. ಉನ್ನತ ಸ್ಥಾನದಲ್ಲಿರುವ ಹಳೆಯ ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸ ಆಗಬೇಕಿದೆ. ರಾಜಕೀಯ ಕ್ಷೇತ್ರದಲ್ಲಿ ಬೆಳೆದ ವಿದ್ಯಾರ್ಥಿಗಳನ್ನು ಸಹ ಗೌರವಿಸಲಾಗುವುದು. ಡಿ.17 ರಿಂದ 19 ರವರೆಗೆ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ ಎಂದರು.
ಡಿ.17 ಹಾಗೂ 18 ರಂದು ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.19 ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಆಗಮಿಸಲಿದ್ದಾರೆ. ಈ ಬಗ್ಗೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಪ್ರಹ್ಲಾದ ರಡ್ಡಿ ತಿಳಿಸಿದರು.
ಸಹಾಯಕ ಪ್ರಾಧ್ಯಾಪಕರಾದ ಖಾದರಬಾಷಾ, ವೈಜನಾಥ ಹಿರೇಮಠ, ಬಸವರಾಜ ತಡಕಲ್, ಶಿವಯ್ಯ, ಹನುಮಂತಪ್ಪ, ಹಳೆಯ ವಿದ್ಯಾರ್ಥಿಗಳಾದ ಪತ್ರಕರ್ತ ಪ್ರಹ್ಲಾದ್ ಗುಡಿ, ನಿರುಪಾದಪ್ಪ ಗುಡಿಹಾಳ, ಎಸ್.ದೇವೇಂದ್ರ ಗೌಡ, ಶರಣಬಸವ ವಕೀಲ, ಮಲ್ಲಿಕಾರ್ಜುನ, ಶೇಖರಪ್ಪ ಗಿಣಿವಾರ, ಚಂದ್ರಶೇಖರ ಯರದಿಹಾಳ, ಎತ್ಮಾರಿ ವಕೀಲ, ಡಾ.ಹುಸೇನಪ್ಪ ಅಮರಾಪುರ, ಶರಣಪ್ಪ ಹೊಸಳ್ಳಿ, ಕಂಟೆಪ್ಪ ಕೋಟೆ ಇದ್ದರು.