ಕೊಯಮತ್ತೂರು: ಚಪ್ಪಲಿ, ಕಾರಿನ ಸೀಟು, ಬೆಲ್ಟ್ಗಳಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುವುದನ್ನು ಕಂಡಿದ್ದೇವೆ. ಆದರೆ ಇಲ್ಲಿಬ್ಬರು ಮಹಿಳೆಯರು ತಾವು ಧರಿಸಿದ್ದ ಸ್ಯಾನಿಟರಿ ಪ್ಯಾಡ್ನಲ್ಲೇ ಚಿನ್ನವನ್ನು ಕಳ್ಳ ಸಾಗಣೆ ಮಾಡುವ ಪ್ರಯತ್ನ ಮಾಡಿದ್ದು, ಇದೀಗ ಕಸ್ಟಮ್ಸ್ ಅಧಿಕಾರಿಗಳ ವಶವಾಗಿದ್ದಾರೆ.
ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನರಾದ ಅಕ್ಷರ ಮಾಂತ್ರಿಕ ರವಿ ಬೆಳಗೆರೆ
ಇಂತದ್ದೊಂದು ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ದೇವಾಣಿ ರಾಧಾಕೃಷ್ಣನ್ ಮತ್ತು ವಸಂತಿ ರಾಮಸ್ವಾಮಿ ಹೆಸರಿನ ಇಬ್ಬರು ಮಹಿಳೆಯರು ಬುಧವಾರ ಮುಂಜಾನೆ 3.30ಕ್ಕೆ ಕೊಯಮತ್ತೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಅರೇಬಿಯಾ ವಿಮಾನದಲ್ಲಿ ಬಂದಿಳಿದಿದ್ದಾರೆ. ಈ ಇಬ್ಬರು ಶಾರ್ಜಾದಿಂದ ಕೊಯಮತ್ತೂರಿಗೆ ಬಂದಿದ್ದಾರೆ ಎನ್ನಲಾಗಿದೆ.
ಮೆಟಲ್ ಡಿಟೆಕ್ಟರ್ನಲ್ಲಿ ಪರಿಶೀಲನೆ ಮಾಡುವಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ತಾವು ಧರಿಸಿದ್ದ ಸ್ಯಾನಿಟರಿ ಪ್ಯಾಡ್ನಲ್ಲಿ 62.46 ಲಕ್ಷ ರೂಪಾಯಿ ಮೌಲ್ಯದ 1.1956 ಕೆ.ಜಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಅವರು ಅಡಗಿಸಿಟ್ಟುಕೊಂಡಿದ್ದರು. ವಿಚಾರ ತಿಳಿದುಬರುತ್ತಿದ್ದಂತೆ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ರಾಜೀವ್ಗಾಂಧಿ ಆರೋಗ್ಯ ವಿವಿಯ ಕಾಲೇಜು ತೆರೆಯಲು ಡೇಟ್ ಫಿಕ್ಸ್
ದೇವಾಣಿ ಚೆನ್ನೈ ಮೂಲದವರಾಗಿದ್ದು, ವಸಂತಿ ಪಡುಕೊಟ್ಟೈ ಮೂದವರಾಗಿದ್ದಾರೆ. ಕೇವಲ ಇವರಿಬ್ಬರರಷ್ಟೆ ಅಲ್ಲದೆ ಇನ್ನೂ ಐದು ಜನ ಪುರುಷರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಐವರು ಪುರುಷರು, 46 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಮದ್ಯ ಮತ್ತು ಸಿಗರೇಟ್ ಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ. ಇವರಲ್ಲಿ ಇಬ್ಬರು ಚೆನ್ನೈ ಮೂಲದವರಾಗಿದ್ದು, ಇನ್ನಿಬ್ಬರು ಪಟ್ಟಿನಮ್, ಮತ್ತೋರ್ವ ಇಲ್ಲಯಗುಂಡಿ ಮೂಲದವನು ಎನ್ನಲಾಗಿದೆ. (ಏಜೆನ್ಸೀಸ್)
3 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಕಸವೆಂದು ಎಸೆದ ಮಹಿಳೆ; ಹಬ್ಬ ಬಂದ್ರೆ ಹೀಗೆಲ್ಲಾ ಆಗತ್ತೆ
‘ಉಹೂಂ, ಇದು ನನ್ನ ಕೊನೆಯ ಚುನಾವಣೆ ಅಲ್ಲವೇ ಅಲ್ಲ’, ಗೆದ್ದ ಮೇಲೆ ಉಲ್ಟಾ ಹೊಡೆದ ನಿತೀಶ್ ಕುಮಾರ್