More

    ರೂಪಾಲಿ ನಾಯ್ಕಗೆ ಗೋವಾ ಸಿಎಂ ಸಾಥ್

    ಕಾರವಾರ: ಬಿಜೆಪಿ ಅಭ್ಯರ್ಥಿಯಾಗಿ ಶಾಸಕಿ ರೂಪಾಲಿ ನಾಯ್ಕ ಸೋಮವಾರ ಚುನಾವಣಾಧಿಕಾರಿ ಜಯಲಕ್ಷ್ಮೀ ರಾಯಕೋಡ ಅವರಿಗೆ ನಾಮಪತ್ರ ಸಲ್ಲಿಸಿದರು.
    ಅಂಕೋಲಾ-ಕಾರವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಪ್ರಮೋದ ಮಧ್ವರಾಜ, ನಿತಿನ್ ಪಿಕಳೆ, ಜಗದೀಶ ಬಿರ್ಕೋಡಿಕರ್ ಸಾಥ್ ನೀಡಿದರು.

    ಮೋದಿ ಹೊಗಳಿದ ರೂಪಾಲಿ

    ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ‘ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇವ ಮಾನವನಂತೆ ಇದ್ದಾರೆ. ರಾಮ ಮಂದಿರ, ಕಾಶಿ ಕಾರಿಡಾರ್ ಅವರ ಕಾಲದಲ್ಲೇ ನಿರ್ಮಾಣವಾಗಿದೆ ಎಂದರು.
    ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಕರೊನಾ ಸಂಕಷ್ಟದಲ್ಲೂ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದೆ.
    ಕಾರವಾರ, ಅಂಕೋಲಾದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಈ ಹಿಂದೆ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಮುಂದೆಯೂ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದರು.


    ಅದ್ದೂರಿ ಮೆರವಣಿಗೆ

    ನಗರದ ಮಾಲಾದೇವಿ ಮೈದಾನ, ಮಾರುಕಟ್ಟೆ ಗಣಪತಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ರೂಪಾಲಿ ನಾಯ್ಕ ನಾಮಪತ್ರ ಸಲ್ಲಿಕೆಗೆ ಮೆರವಣಿಗೆಯಲ್ಲಿ ಆಗಮಿಸಿದರು.
    ಸಾವಿರಾರು ಜನರು ನಾಮಪತ್ರ ಸಲ್ಲಿಕೆಯ ಮೆರವಣಿಗೆಗೆ ಸಾಕ್ಷಿಯಾದರು. ಐದಾರು ಸಾವಿರ ಜನ ಕೇಸರಿ ಧ್ವಜ ಹಿಡಿದು ನಡೆದು ಬಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts