ಮೈಸೂರು: ರ್ಯಾಂಡಮ್ ಪರೀಕ್ಷೆ ವೇಳೆ ಕರೊನಾ ಪಾಸಿಟಿವ್ ಪತ್ತೆಯಾಗಿದೆ ನಿಂತ್ಕೊಳ್ಳಿ ಎಂದು ಹೇಳಿದರೂ ಸಹ ಯುವತಿಯೊಬ್ಬಳು ಕ್ಯಾರೆ ಎನ್ನದೇ ಬೈಕ್ ಏರಿ ಹೊರಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಇಂದು ಉದಯಗಿರಿಯ ಕ್ಯೂಬಾ ಮಸೀದಿ ಬಳಿ ಆರೋಗ್ಯ ಸಿಬ್ಬಂದಿ ರ್ಯಾಂಡಮ್ ಟೆಸ್ಟ್ ಮಾಡುತ್ತಿದ್ದರು, ಈ ವೇಳೆ ಸ್ಯಾಂಪಲ್ ನೀಡಿದ ಯುವತಿಯೊಬ್ಬಳಿಗೆ ಪಾಸಿಟಿವ್ ಬಂದಿತ್ತು. ಇದನ್ನು ಅವರಿಗೆ ತಿಳಿಸಿ ಆಸ್ಪತ್ರೆಗೆ ದಾಖಲಾಗಿ ಎಂದರೂ ಸಹ ಕ್ಯಾರೆ ಎನ್ನದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಗದೆ ಮಗು ಸಾವು; ಸಿಎಂ ಮನೆ ಬಳಿ ತಂದೆ ಹೋರಾಟ
ನಿಮ್ಮ ಮೇಲೆ ಕೇಸ್ ಹಾಕುತ್ತೇವೆ ಅಂದ್ರು ತಲೆ ಕೆಡೆಸಿಕೊಳ್ಳದೇ ಯುವತಿ ಹಾಗೂ ಕುಟುಂಬಸ್ಥರು ಸ್ಥಳದಿಂದ ಅಧಿಕಾರಿಗಳ ಎದುರಲ್ಲೇ ಬೈಕ್ ಏರಿ ಹೊರಟ್ಟಿದ್ದಾರೆ. ಇದೀಗ ಎನ್.ಆರ್.ಕ್ಷೇತ್ರದಲ್ಲಿ ಜನರು ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಏರಿಯಾವನ್ನು ಲಾಕ್ಡೌನ್ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್)
ನದಿಯಲ್ಲಿ ಅನಾಥವಾಗಿ ತೇಲುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ತೆರೆದವರಿಗೆ ಕಾದಿತ್ತು ಬಿಗ್ ಶಾಕ್!