More

    ಗಂಜಾಂ ಹರೀಶ್‌ಗೌಡ ಅವಿರೋಧ ಆಯ್ಕೆ

    ಶ್ರೀರಂಗಪಟ್ಟಣ: ಕರ್ನಾಟಕ ರಕ್ಷಣಾ ವೇದಿಕೆಯ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರಾಗಿ ಗಂಜಾಂ ಹರೀಶ್‌ಗೌಡ ಅವಿರೋಧವಾಗಿ ಆಯ್ಕೆಯಾದರು.

    ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಘಟನೆಯ ವಿಭಾಗ ಮಟ್ಟದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಆಯ್ಕೆ ಮಾಡಲಾಯಿತು ಎಂದು ಕರವೇ ಮೈಸೂರು ಜಿಲ್ಲಾಧ್ಯಕ್ಷ ಪ್ರವೀಣ್ ಗೌಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಗಂಜಾಂ ಹರೀಶ್ ಗೌಡ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಲಾಗುವುದು ಎಂದರು.

    ಮಂಡ್ಯ ಜಿಲ್ಲಾಧ್ಯಕ್ಷ ವೇಣು, ಚಾಮಾರಾಜನಗರ ಜಿಲ್ಲಾಧ್ಯಕ್ಷ ಹರೀಶ್, ಪದಾಧಿಕಾರಿಗಳಾದ ದುಷ್ಯಂತ್, ವೆಂಕಟೇಶ್, ಶಂಕರ್, ಸೋಮಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts