More

    ನಮ್ಮಲ್ಲಿ ಗ್ಯಾಂಗ್​ಸ್ಟರ್​ಗಳು ಪ್ಯಾಂಟ್​ ಒದ್ದೆ ಮಾಡಿಕೊಳ್ಳುತ್ತಿದ್ದಾರೆ: ಯೋಗಿ ಆದಿತ್ಯನಾಥ್​

    ಉತ್ತರಪ್ರದೇಶ: ಉತ್ತರಪ್ರದೇಶದ ಫೈರ್​ ಬ್ರ್ಯಾಂಡ್​ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಮಾಫಿಯಾ ಮತ್ತು ದರೋಡೆಕೋರರ ವಿರುದ್ಧ ಬೃಹತ್ ದಮನವನ್ನು ನಾವು ಆರಂಭಿಸಿದ್ದು ಸುಲಿಗೆ ಬೆದರಿಕೆಗಳೊಂದಿಗೆ ಜನರನ್ನು ಭಯಭೀತಗೊಳಿಸುತ್ತಿದ್ದವರು ಈಗ ನ್ಯಾಯಾಲಯದ ಶಿಕ್ಷೆಗೆ ಹೆದರಿ ನಂತರ ತಮ್ಮ ಪ್ಯಾಂಟ್ ಅನ್ನು ಒದ್ದೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು. ಗ್ಯಾಂಗ್​ಸ್ಟರ್​-ರಾಜಕಾರಣಿ ಅತೀಕ್ ಬಂಧನವಾದ ಕೆಲವೇ ದಿನಗಳಲ್ಲಿ ಈ ಹೇಳಿಕೆ ಬಂದಿದೆ.

    ಇದನ್ನೂ ಓದಿ: ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್​ಗೆ ಪ್ರಾಣ ಬೆದರಿಕೆ ಒಡ್ಡಿದ 16ರ ಪೋರ!

    ಯೋಗಿ ಆದಿತ್ಯನಾಥ್ ಹೇಳಿದ್ದಿಷ್ಟು…

    ಯೋಗಿ ಆದಿತ್ಯನಾಥ್​ “ಮೊದಲು ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಸ್ವಲ್ಪವೂ ಗೌರವ ತೋರಿಸದ ಜನರು ಈಗ ತಮ್ಮ ಪ್ರಾಣಕ್ಕಾಗಿ ಭಯಪಟ್ಟುಕೊಂಡು ಓಡುತ್ತಿರುವುದನ್ನು ಜನರು ನೋಡುತ್ತಿದ್ದಾರೆ” ಎಂದು ಬಾಟ್ಲಿಂಗ್ ಪ್ಲಾಂಟ್‌ನ ಭೂಮಿ ಪೂಜೆಯ ನಂತರ ಸಭೆಯನ್ನುದ್ದೇಶಿಸಿ ಅವರು ಈ ಹೇಳಿಕೆಯನ್ನು ನೀಡಿದರು.

    “ಇಂದು ರಾಜ್ಯದಲ್ಲಿ ಹೂಡಿಕೆದಾರರ ಭದ್ರತೆ ಮತ್ತು ಅವರ ಬಂಡವಾಳ ಖಾತರಿಯಾಗಿದೆ. ಉತ್ತರಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೀರಿ ಹೋಗಲು ಯಾರಿಗೂ ಅವಕಾಶವಿಲ್ಲ. ಬಲವಾದ ಕಾನೂನು-ಸುವ್ಯವಸ್ಥೆ ಪರಿಸ್ಥಿತಿಯೊಂದಿಗೆ, ಜನ ಜೀವನಕ್ಕೆ ಶತ್ರುಗಳಾಗಿರುವ ಮಾಫಿಯಾ ಈಗ ಭಯದಲ್ಲಿದೆ. ಅವರ ಜೀವನದ ಬಗ್ಗೆ, ಜನರನ್ನು ಭಯಭೀತಗೊಳಿಸುವವರ ವಿರುದ್ಧ ನ್ಯಾಯಾಲಯಗಳು ತೀರ್ಪು ನೀಡಿದಾಗ, ಅವರು ತುಂಬಾ ಭಯಭೀತರಾಗುತ್ತಾರೆ – ‘ಉಂಕಿ ಪ್ಯಾಂಟ್​ ಗೀಲಿ ಹೋ ಜಾ ರಹೀ ಹೈ (ಅವರು ತಮ್ಮ ಪ್ಯಾಂಟ್ ಒದ್ದೆ ಮಾಡುತ್ತಾರೆ)” ಅವರು ಹೇಳಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts