More

    ಪಾದಯಾತ್ರೆಯಲ್ಲಿ ಧರ್ಮ ಜಾಗೃತಿ

    ಗಂಗಾವತಿ: ಲೋಕಕಲ್ಯಾಣ ಮತ್ತು ಪರಿಸರ ಜಾಗೃತಿಗಾಗಿ ಉತ್ತರ ಪ್ರದೇಶದ ಅಯೋಧ್ಯೆ ಶ್ರೀರಾಮ ಮಂದಿರದಿಂದ ಪಾದಯಾತ್ರೆ ಹಮ್ಮಿಕೊಂಡ ಮಾತಾ ಶಿಪ್ರಾ ಪಾಠಕ್ ಬುಧವಾರ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು.

    ಉತ್ತರ ಪ್ರದೇಶದ ಬದಾಯು ಪಂಚತತ್ವ ಆಶ್ರಮದಲ್ಲಿರುವ ಶಿಪ್ರಾ ಪಾಠಕ್, ಅಯೋಧ್ಯೆಯಿಂದ ರಾಮೇಶ್ವರ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಶ್ರೀರಾಮಚಂದ್ರ ನಡೆದಾಡಿದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿದ್ದು, ಪರಿಸರ ಕಾಳಜಿ ಮತ್ತು ಸ್ವಚ್ಛತೆಯ ಸಂದೇಶ ನೀಡುತ್ತಿದ್ದಾರೆ.

    ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದ ಪಾಠಕ್‌ರನ್ನು ಸ್ಥಳೀಯರು ಸ್ವಾಗತಿಸಿ, ಸನ್ಮಾನಿಸಿದರು. ಶ್ರೀರಾಮಚಂದ್ರ ನಡೆದಾಡುವ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದು, ಅದರಂತೆ ಪಂಪಾಸರೋವರ, ಅಂಜನಾದ್ರಿ, ಶಬರಿ ಗುಹೆ ಸೇರಿ ಪ್ರಮುಖ ಸ್ಥಳಗಳನ್ನು ವೀಕ್ಷಿಸಿದ್ದೇನೆ. ಧರ್ಮ ಜಾಗೃತಿಯಿಂದ ದೇಶ ರಕ್ಷಣೆ ಸಾಧ್ಯ ಎಂದರು. ಅರ್ಚಕ ವಿದ್ಯಾದಾಸ ಬಾಬಾ, ದೇವಾಲಯ ಸಿಬ್ಬಂದಿ ಮತ್ತು ಗ್ರಾಮಸ್ಥರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts