ಗಂಗಾವತಿ: ಹಿಂದು ಸಾಮ್ರಾಜ್ಯದ ಉನ್ನತಿಗೆ ಜೀವನವನ್ನೇ ಮುಡಿಪಾಗಿಟ್ಟ ಛತ್ರಪತಿ ಶಿವಾಜಿ ಆದರ್ಶ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ವಿದ್ಯಾನಗರದ ರೈಲ್ವೆ ನಿಲ್ದಾಣದ ಬಳಿ ಕ್ಷತ್ರಿಯ ಮರಾಠ ಸಮುದಾಯ ಕೈಗೊಂಡ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ದೇಶವನ್ನು ರಕ್ಷಿಸಿದ ಕ್ಷತ್ರಿಯರ ಶೂರತ್ವ ಹಾಗೂ ಮಾನವೀಯ ಸ್ಪಂದನೆ ಮಾದರಿಯಾಗಿದ್ದು, ಹಿಂದುತ್ವ ಪ್ರತಿಪಾದಿಸುವ ಸಮುದಾಯವಾಗಿದೆ. ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ನಗರಸಭೆ ಸದಸ್ಯ ಶರಭೋಜಿರಾವ್ ಗಾಯಕ್ವಾಡ್ ಮಾತನಾಡಿ, ಶಿವಾಜಿ ಕಂಚಿನ ಮೂರ್ತಿಯನ್ನು 30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಬಿಡದಿ ಬಳಿ ಅಂತಾರಾಷ್ಟ್ರೀಯ ಕಲಾ ಕೇಂದ್ರದಲ್ಲಿ ತಯಾರಾಗಲಿದೆ ಎಂದರು.
ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ನಗರಸಭೆ ಸದಸ್ಯರಾದ ಉಮೇಶ ಸಿಂಗನಾಳ್, ನೀಲಕಂಠಪ್ಪ ಕಟ್ಟಿಮನಿ, ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳಾದ ಸಂತೋಷ ಕೆಲೋಜಿ, ವೆಂಕಟೇಶ ಅಮರಜ್ಯೋತಿ, ಕ್ಷತ್ರೀಯ ಸಮಾಜದ ಮುಖಂಡರಾದ ತಿಪ್ಪಣ್ಣ ಬಿದರ್ಕರ್, ರಮೇಶ್ ಗೌಳಿ, ಸಿದ್ದು ಗೌಳಿ, ಅಮರ್ ಸಿಂಗ್, ಬಲರಾಂ ಸಿಂಗ್, ಗಿರೀಶ್ ಗಾಯಕ್ವಾಡ್, ಉಮೇಶ ಸಿಂಗ್ ಇತರರಿದ್ದರು.