ಮೈಸೂರು: ಮೈಕ್ ಚಂದ್ರು ಗೆಳೆಯರ ಬಳಗದ ವತಿಯಿಂದ ಮಾರ್ಚ್ 30 ರಂದು ಸಂಜೆ 5 ಗಂಟೆಗೆ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ‘ಗಾನಸಿರಿ’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಗಾಯಕರಾದ ನಿತಿನ್ ರಾಜಾರಾಂ ಶಾಸ್ತ್ರಿ, ಷಬ್ಬೀರ್, ಮೈಸೂರು ಆನಂದ್, ವಿಶ್ವನಾಥ್, ದಿವ್ಯ ಸಚ್ಚಿದಾನಂದ, ಹಂಸಿನಿ, ಡಾ.ಶಿವಾನಿ ಅವರು ಹಳೆಯ ಸುಮಧುರ ಕನ್ನಡ, ಹಿಂದಿ, ತಮಿಳ ಹಾಗೂ ತೆಲುಗು ಚಿತ್ರಗೀತೆಗಳನ್ನು ಹಾಡಲಿದ್ದಾರೆ.