More

    ಕಾಂಗ್ರೆಸ್ಸಿಗೆ ಜೆಡಿಎಸ್​ ಪಕ್ಷದ ಹೋರಾಟದ ಭಯ: ವೆಂಕನಗೌಡ ಗೋವಿಂದಗೌಡ್ರ

    ವಿಜಯವಾಣಿ ಸುದ್ದಿಜಾಲ ಗದಗ
    ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆಯಿಂದ ಹಿಂದೆ ಸರಿಯಲು ಮತ್ತು ಪ್ರಿಯಾಂಕಾ ವಾದ್ರಾ ಪ್ರಚಾರ ಸಭೆಯಲ್ಲಿ ಭಾಗವಹಿಸದೇ ಇರುವುದಕ್ಕೆ ಜೆಡಿಎಸ್​ ಹೋರಾಟವೇ ಕಾರಣ ಎಂದು ಜೆಡಿಎಸ್​ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಹೇಳಿದರು.
    ಭಾನುವಾರ ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಪ್ರಿಯಾಂಕಾ ವಾದ್ರಾ ಅವರು ಆಗಮಿಸಿದ್ದಾಗ ಪೊಲೀಸರು ಒತ್ತಾಯದಿಂದ ಜೆಡಿಎಸ್​ ಕಾರ್ಯಕರ್ತರನ್ನು ಬಂಧಿಸಿದರು. ಸರ್ಕಾರ ಪೊಲೀಸ್​ ಬಲವನ್ನು ದುರುಪಯೋಗ ಮಾಡಿಕೊಂಡು ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು. ಆದರೂ ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದರು.
    ಗದಗ ಬೆಟಗೇರಿ ಅವಳಿ ನಗರದಲ್ಲಿ ನೀರಿನ ಸಮಸ್ಯೆ ಬೃಹದಾಕಾರವಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಜೆಡಿಎಸ್​ ಹೋರಾಟ ಆರಂಭಿಸುತ್ತದೆ. ಕುಡಿಯುವ ನೀರಿಗಾಗಿ ಸರ್ಕಾರ ಸಾವಿರಾರು ಕೋಟಿ ರೂ. ವ್ಯಯ ಮಾಡಿದರೂ ನೀರು ಬರುತ್ತಿಲ್ಲ. ಅಸಮರ್ಪಕ ನೀರು ಪೂರೈಕೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿ, ನೀರು ಪೂರೈಕೆ ಆಗುವ ವರೆಗೂ ಚಳವಳಿ ನಡೆಸಲಾಗುವುದು ಎಂದರು.
    ಗಿರೀಶ ಸಂಶಿ, ಎಂ.ಎಸ್​. ಪರ್ತಗೌಡ್ರ, ಬಿಜೆಪಿ ಮುಖಂಡ ಗುದ್ನೆಪ್ಪ ಶೆಟ್ಟರ್​, ಬಸವರಾಜ ಅಪ್ಪಣ್ಣವರ, ಅಶೋಕ ಜವಳಿ, ಪ್ರುಲ್​ ಪುಣೇಕರ, ಕೆ.ಎಫ್​ . ದೊಡ್ಡಮನಿ, ಮನೋಜ ಮೆಹತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts