More

    ಪ್ರಾಣಾಪಾಯದಿಂದ ಯುವಕ ಪಾರು

    ಸವದತ್ತಿ: ಸ್ಥಳೀಯ ಮಲಪ್ರಭಾ ಬಲದಂಡೆ ಕಾಲುವೆಯ ಸುರಂಗ ಮಾರ್ಗದಲ್ಲಿ ಈಜಲು ಹೋಗಿ ನೀರಿನ ರಭಸಕ್ಕೆ ಸಿಲುಕಿದ ಯುವಕನೋರ್ವ ಗಂಟೆಗಳ ಕಾಲ ಜೀವನ್ಮರಣದ ಮಧ್ಯೆ ಹೋರಾಡಿ ಅಗ್ನಿಶಾಮಕ ದಳ ಸಿಬ್ಬಂದಿ ನೆರವಿನಿಂದ ಬದುಕುಳಿದಿದ್ದಾನೆ.

    ಕುಟುಂಬ ಸಮೇತ ಯಲ್ಲಮ್ಮ ದೇವಿ ಜಾತ್ರೆಗೆ ಮಂಗಳವಾರ ಆಗಮಿಸಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಾಗರಾಳ ಗ್ರಾಮದ ವಿಠ್ಠಲ ರಾಮಪ್ಪ ಹೊಸಗೌಡ್ರ (18) ಬದುಕುಳಿದ ಯುವಕ.

    ಕಾಲುವೆ ಆಳ ತಿಳಿಯದೆ ನೀರಿನಲ್ಲಿ ಇಳಿದಿದ್ದಾನೆ. ನೀರಿನ ರಭಸಕ್ಕೆ ಸಿಲುಕಿ ಸುರಂಗ ಮಾರ್ಗದಲ್ಲಿ ಸುಮಾರು 200 ಅಡಿಯಷ್ಟು ಒಳಗೆ ಹೋಗಿ ಕಬ್ಬಿಣದ ರಾಡ್ ಸಹಾಯದಿಂದ ಮುಂದೆ ಹೋಗದೆ ಅಲ್ಲಿಯೇ ಆಸರೆ ಪಡೆದಿದ್ದಾನೆ. ಕತ್ತಲು ಆವರಿಸಿದ್ದ ವಾತಾವರಣದಲ್ಲಿ ಸುಮಾರು ಗಂಟೆಗಳ ಕಾಲ ನೀರಿನಲ್ಲಿಯೇ ಕಾಲ ಕಳೆದಿದ್ದಾನೆ.

    ದಾರಿಹೋಕರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹಗ್ಗದ ಸಹಾಯದಿಂದ ಯುವಕನನ್ನು ರಕ್ಷಿಸಿದ್ದಾರೆ. ಎಂ.ಕೆ. ಕಲಾದಗಿ, ಎನ್.ಎಂ. ಪವಾಡಿ, ವಿ.ಸಿ. ಅಂಗಡಿ, ಬಿ.ವಿ. ಕರಿಸಿರಿ, ವಿ.ಎಸ್. ತೋಡಕರ, ಎಂ.ಎಸ್.ಪಂಚೆನ್ನವರ, ಎಸ್.ಜಿ. ಮಠಪತಿ ಕಾರ್ಯಾಚರಣೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts