More

    ಬಾಳೆಹೊನ್ನಿಗ ಗ್ರಾಮದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ

    ಹಲಗೂರು: ಸಮೀಪದ ಬಾಳೆಹೊನ್ನಿಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಡಿ.ಆರ್. ಗುರು ಶಿಷ್ಯರ ಬಳಗ, ದಳವಾಯಿ ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹಲಗೂರು ಮನು ರಕ್ತ ಪರೀಕ್ಷಾಲಯ ವತಿಯಿಂದ ಆರೋಗ್ಯ ಮತ್ತು ಹೃದಯ ಉಚಿತ ತಪಾಸಣಾ ಶಿಬಿರವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

    ಶಿಬಿರದಲ್ಲಿ ನೂರಾರು ಜನರಿಗೆ ರಕ್ತ ಪರೀಕ್ಷೆ, 35 ಜನರಿಗೆ ಇಸಿಜಿ ಮಾಡಲಾಯಿತು. ಅದರಲ್ಲಿ ಇಬ್ಬರಿಗೆ ಸಮಸ್ಯೆ ಕಂಡುಬಂದಿದ್ದು ಅವರನ್ನು ಪಟ್ಟಣದ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

    ವೈದ್ಯಾಧಿಕಾರಿ ಡಾ.ಮಹದೇಪ್ರಸಾದ್ ಮತ್ತು ಡಾ.ರೂಪಕಲಾ ತಪಾಸಣೆ ನಡೆಸಿ ಅವಶ್ಯಕತೆ ಇರುವವರಿಗೆ ಔಷಧಗಳನ್ನು ನೀಡಲಾಯಿತು.
    ಡಿ.ಆರ್.ಗುರು ಶಿಷ್ಯರ ಬಳಗದ ಅಧ್ಯಕ್ಷ ಎ.ಎಸ್.ದೇವರಾಜು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದು ಹೆಚ್ಚಾಗಿ ಕೂಲಿ ಕಾರ್ಮಿಕರೇ ಇದ್ದಾರೆ. ಅದಕ್ಕಾಗಿ ಇವರಿಗೆ ಆರೋಗ್ಯ ತಪಾಸಣೆ ಅವಶ್ಯಕತೆ ಇದೆ. ಅದನ್ನು ಮನಗಂಡು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು, ಜನರಿಗೆ ಅನುಕೂಲವಾಗಿದೆ ಎಂದರು.

    ಡಿ.ಆರ್. ಗುರು ಶಿಷ್ಯರ ಬಳಗದ ಅಧ್ಯಕ್ಷ ಎ.ಎಸ್.ದೇವರಾಜು, ಉಪಾಧ್ಯಕ್ಷ ಸುರೇಂದ್ರ, ಬಸವರಾಜು, ಅಭಿ, ರಾಜೇಶ್ವರಿ, ಜಿ.ಎಸ್. ಕೃಷ್ಣ, ಪ್ರವೀಣ, ಮಂಜುನಾಥ್, ಮಹೇಶ, ಗ್ರಾಮದ ಬಿ.ಎಲ್.ಮುತ್ತು, ಬಿ.ಎಂ .ನಾಗರಾಜು, ರವಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts