ಕೋಲಾರ: ಒಬ್ಬರು ಮಕ್ಕಳು ಸೇರಿ ಒಂದೇ ಕಟುಂಬದ ನಾಲ್ವರು ಕೆರೆಯಲ್ಲಿ ಜಲಸಮಾಧಿಯಾಗಿದ್ದು, ಇಡೀ ಊರಿಗೆ ಊರೇ ಬೆಚ್ಚಿಬಿದ್ದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.
ಮುನಿಲಾಲ್ ಪ್ರಸಾದ್ ಎಂಬುವರ ಪತ್ನಿ ರುಕ್ಮಿಣಿ ಬಾಯ್ (35), ಇವರ ಪುತ್ರಿಯರಾದ ಆರತಿ (6), ಕೀರ್ತಿ(5) ಹಾಗೂ ರುಕ್ಮುಣಿಯ ತಂಗಿ ರಾಜೇಶ್ವರಿ (30) ಮೃತ ದುರ್ದೈವಿಗಳು. ಕೃಷ್ಣದಾಸನಪಲ್ಲಿ ಪಂಚಾಯಿತಿ ವ್ಯಾಪ್ತಿಯ ಚಿಂಪನಗಲ್ಲು ಗ್ರಾಮದಲ್ಲಿ ಈ ಅವಘಡ ಸಂಭವಿಸಿದ್ದು, ಶವಗಳನ್ನು ನೀರಿನಿಂದ ಹೊರಕ್ಕೆ ತೆಗೆಯಲಾಗಿದೆ. ಇದನ್ನೂ ಓದಿರಿ ವಿದ್ಯಾರ್ಥಿನಿ ಜತೆ ಲೆಕ್ಚರರ್ ಮಗನ ಕಾಮಪುರಾಣ! 3 ವರ್ಷದಿಂದ ಲವ್-ಸೆಕ್ಸ್-ಅಬಾರ್ಷನ್: ಮುಂದೇನಾಯ್ತು?
ಕೆರೆ ಬಳಿ ಬಟ್ಟೆತೊಳೆಯಲೆಂದು ಅಕ್ಕ-ತಂಗಿಯಾದ ರುಕ್ಮಿಣಿ ಮತ್ತು ರಾಜೇಶ್ವರಿ ಹೋಗಿದ್ದರು. ಆಗ ತಮ್ಮ ಜತೆಯಲ್ಲಿ ಮಕ್ಕಳಾದ ಆರತಿ ಮತ್ತು ಕೀರ್ತಿಯನ್ನೂ ಕರೆದೊಯ್ದಿದ್ದರು. ಅಲ್ಲೇ ಆಟವಾಡುತ್ತ ಕುಳಿತ್ತಿದ್ದ ಮಕ್ಕಳಿಬ್ಬರೂ ನೀರಿಗಿಳಿದಿದ್ದು, ಮುಳುಗುತ್ತಿದ್ದರು.
ಅಯ್ಯೋ ಮಕ್ಕಳೇ… ಎಂದು ಚೀರಾಡುತ್ತಾ ಅವರ ರಕ್ಷಣೆಗೆಂದು ನೀರಿಗೆ ಧುಮುಕಿದ ಆ ಮಕ್ಕಳ ತಾಯಿ ಮತ್ತು ಚಿಕ್ಕಮ್ಮ ಕೂಡ ನೀರಲ್ಲಿ ಮುಳುಗಿದರು. ಒಟ್ಟು ನಾಲ್ವರೂ ಜಲಸಮಾಧಿಯಾದರು. ಸ್ಥಳಕ್ಕೆ ಬಂದ ಕುಪ್ಪಂ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…
ವಿದ್ಯಾರ್ಥಿನಿ ಜತೆ ಲೆಕ್ಚರರ್ ಮಗನ ಕಾಮಪುರಾಣ! 3 ವರ್ಷದಿಂದ ಲವ್-ಸೆಕ್ಸ್-ಅಬಾರ್ಷನ್: ಮುಂದೇನಾಯ್ತು?
ಸೇನೆಯಿಂದ ಸ್ವಗ್ರಾಮಕ್ಕೆ ಬಂದ ಕೋಲಾರದ ಯೋಧ ಪತ್ನಿಯ ಮಡಿಲಲ್ಲೇ ಪ್ರಾಣಬಿಟ್ಟರು!