More

    ಅಡಕೆ ವ್ಯಾಪಾರಿಗೆ ಚೂರಿ ಇರಿತ: ನಾಲ್ಕು ಲಕ್ಷ ರೂ. ದರೋಡೆ 

    ಉಪ್ಪಿನಂಗಡಿ: ಪೆರ್ನೆ ಸಮೀಪದ ಪದೆಬರಿ ಎಂಬಲ್ಲಿ ಮಂಗಳವಾರ ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದ ಅಡಕೆ ವ್ಯಾಪಾರಿಯೋರ್ವರಿಗೆ ಚೂರಿಯಿಂದ ತಿವಿದ ತಂಡ, ಅವರ ಬಳಿಯಿದ್ದ 4 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ದರೋಡೆ ಮಾಡಿದೆ.

    ಪದೆಬರಿ ನಿವಾಸಿ ದೀಪಕ್ ಶೆಟ್ಟಿ(49) ಎಂಬುವರು ಪೆರ್ನೆಯಲ್ಲಿ ಅಡಕೆ ವ್ಯಾಪಾರಿಯಾಗಿದ್ದು, ಮಂಗಳವಾರ ಅಡಕೆ ಮಾರಾಟದ ಬಾಬ್ತು ಬಂದಿದ್ದ 4 ಲಕ್ಷ ರೂ.ಗೂ ಹೆಚ್ಚಿನ ಮೊತ್ತದ ಹಣದೊಂದಿಗೆ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಈ ದರೋಡೆ ನಡೆದಿದೆ. ಚೂರಿಯಿಂದ ತಿವಿಯಲ್ಪಟ್ಟ ದೀಪಕ್ ಶೆಟ್ಟಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

    ಪ್ರಾಥಮಿಕ ಮಾಹಿತಿಗಳ ಪ್ರಕಾರ ನಾಲ್ವರು ದರೋಡೆಕೋರರ ತಂಡ ಬೈಕ್‌ನಲ್ಲಿ ಬಂದು ದೀಪಕ್ ಶೆಟ್ಟಿಯ ತಲೆ ಹಾಗೂ ಹೊಟ್ಟೆಗೆ ಚೂರಿಯಿಂದ ಮಾರಣಾಂತಿಕವಾಗಿ ತಿವಿದು, ಹಣವನ್ನು ದೋಚಿದ್ದಾರೆ. ಈ ದಿನ ಅಡಕೆ ಮಾರಾಟದ ಹಣ ಅವರ ಕೈ ಸೇರಿದ ಬಗ್ಗೆ ಖಚಿತ ಮಾಹಿತಿ ಪಡೆದವರೇ ಈ ಕೃತ್ಯವೆಸಗಿರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts