More

    ಗಂಗಾನದಿಯಲ್ಲಿ ದೋಣಿ ಮುಳುಗಿ ನಾಲ್ವರು ಜಲಸಮಾಧಿ, 24 ಜನ ನಾಪತ್ತೆ

    ಬಲ್ಲಿಯಾ: ಸುಮಾರು 30 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಗಂಗಾ ನದಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 4 ಜನರು ಮೃತಪಟ್ಟು, 25 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ದುರಂತವು ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ಗಂಗಾಘಾಟ್‌ನಲ್ಲಿ ನಡೆದಿದೆ.

    ಇದನ್ನೂ ಓದಿ: ಕಾಫಿ ತೋಟದಲ್ಲಿ ಮಹಿಳೆಯ ಕಾಲು ಪತ್ತೆ ಪ್ರಕರಣ; ದೇಹ ಹುಡುಕಲು ಪೊಲೀಸರಿಂದ ಕೂಂಬಿಂಗ್

    ಇಂದು ಮುಂಜಾನೆ ದೋಣಿ ಒಂದು ದಡದಿಂದ ಇನ್ನೊಂದು ದಡಕ್ಕೆ ತೆರಳುತ್ತಿತ್ತು. ದೋಣಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ದೋಣಿಯಲ್ಲಿದ್ದ ಕಾರಣ, ದೋಣಿಯ ಸಮತೋಲನ ತಪ್ಪಿ ಮುಗುಚಿ ನದಿಗೆ ಬಿದ್ದಿದೆ. ಈ ವೇಳೆ ಜನರು ಪ್ರಾಣಭಯದಿಂದ ಕಿರುಚಾಡಿದ್ದು ಇವರ ಅರಚಾಟ ಕೇಳಿ ತಕ್ಷಣವೇ ಮೀನುಗಾರರು, ಸ್ಥಳೀಯರು ರಕ್ಷಣೆಗೆ ಧಾವಿಸಿ ಕೆಲವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಸುಮಾರು 20-25 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts