ತಿರುವನಂತಪುರಂ: ಸಿಪಿಐ-ಎಂ ಯುವಮೋರ್ಚಾದ ಇಬ್ಬರು ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಂದು ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ ಸಿಪಿಐ-ಎಂ ಯುವಮೋರ್ಚಾ ಸದಸ್ಯರಾದ ಕಾರ್ಯಕರ್ತರಾದ ಹಕ್ ಮೊಹಮ್ಮದ್ (24) ಮತ್ತು ಮಿಥಿಲಾಜ್ (32) ಎಂಬುವರನ್ನು ತಿರುವನಂತಪುರಂನಿಂದ 25 ಕಿಮೀ ದೂರದಲ್ಲಿರುವ ವೆಂಜಾರಾಮೂಡುವಿನಲ್ಲಿ, ಬೈಕ್ನಲ್ಲಿ ಬಂದ ಐವರು, ಲಾಂಗು, ಚೂರಿಗಳಿಂದ ಇರಿದು ಹತ್ಯೆ ಮಾಡಿದ್ದರು.
ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೇಜಿತ್, ಅಜಿತ್, ನಜೀಬ್, ಸಾಥಿ ಎಂಬುವರನ್ನು ಬಂಧಿಸಿದ್ದೇವೆ. ಇವರೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇವರನ್ನು ಹೊರತು ಪಡಿಸಿದ ಇನ್ನೂ ನಾಲ್ವರನ್ನು ವಿಚಾರಣೆಗೆ ವಶಕ್ಕೆ ಪಡೆದುಕೊಂಡಿದ್ದೇವೆ. ಪ್ರಮುಖ ಆರೋಪಿಗಳಾದ ಸಜೀವ್, ಸನಲ್ ಇಬ್ಬರನ್ನು ಇನ್ನೂ ಬಂಧಿಸಲಾಗಲಿಲ್ಲ ಎಂದು ಹೇಳಿದ್ದಾರೆ.
ಹತ್ಯೆಯಾದ ಕಾರ್ಯಕರ್ತರ ಗುಂಪು ಮತ್ತು ಈಗ ಬಂಧಿಸಲ್ಪಟ್ಟ ಗ್ಯಾಂಗ್ ನಡುವೆ ಮೊದಲಿನಿಂದಲೂ ಘರ್ಷಣೆ ಇದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಒಮ್ಮೆ ಗಲಾಟೆ ಮಾಡಿಕೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿಯೇ ಸ್ಫೂರ್ತಿ: ಬಿಜೆಪಿ ಶಾಸಕನಿಂದ ಹಳ್ಳಿಗಳ ದತ್ತು- ಪ್ಯಾಡ್, ಸೋಪ್ ವಿತರಣೆ
ಸಿಪಿಐ-ಎಂ ಕಾರ್ಯಕರ್ತರ ಸಾವಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿ, ಪಕ್ಷದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ತನಿಖೆಗೂ ಆಗ್ರಹಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಕೂಡ ತಮಗೂ, ಘಟನೆಗೂ ಸಂಬಂಧವಿಲ್ಲ ಎಂದು ಹೇಳಿದೆ.
ಇವರಿಬ್ಬರ ಸಾವಿನ ನಂತರ ಸಿಪಿಐ-ಎಂ ಕಾರ್ಯಕರ್ತರು ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳ ಹಲವು ಕಡೆ ಕಾಂಗ್ರೆಸ್ ಕಚೇರಿಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. (ಏಜೆನ್ಸೀಸ್)
ಈ ಬಾರಿ ವಿದ್ಯಾರ್ಥಿಗಳಿಗೆ ಇರಲ್ಲ ರಿಯಾಯ್ತಿ ಬಸ್ಪಾಸ್; ಹಣ ಕೊಡಲ್ಲ ಎಂದು ಸರ್ಕಾರದ ಆದೇಶ