More

    ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ: ಮಾಜಿ ಸಚಿವ ವಿ.ಸೋಮಣ್ಣ ಹೇಳಿಕೆ

    ಬೆಂಗಳೂರು: ಚುನಾವಣೆಯಲ್ಲಿ ಸೋತ ತಕ್ಷಣ ಎಲ್ಲವೂ ಮುಗಿದು ಹೋಯಿತೆಂದಿಲ್ಲ. ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ. ರಾಜಕೀಯ ನಿವೃತ್ತಿ ಎಂಬುದೊಂದು ನಾಟಕವಷ್ಟೇ ಎಂದು ಮಾಜಿ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದರು.

    ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಪಕ್ಷದ ಆದೇಶದಂತೆ ಚಿನ್ನದಂತಹ ಕ್ಷೇತ್ರ ಬಿಡಬೇಕಾಯಿತು. ಸೋಲು, ಗೆಲುವು, ಕ್ಷೇತ್ರಕ್ಕಿಂತ ಪಕ್ಷ ಮುಖ್ಯವಾಗಿದೆ. ವರಿಷ್ಠರ ಸೂಚನೆಯನ್ನು ಪಾಲಿಸಿರುವೆ. ಪ್ರಧಾನಿ ನರೇಂದ್ರ ಮೋದಿಯವರ ಕೆಲಸಗಳು ಅವಿಸ್ಮರಣೀಯ ಎಂದರು.

    ಇದನ್ನೂ ಓದಿ: ಸ್ವಂತ ಹೆಂಡತಿಯ ಬಾತ್​ರೂಮ್ ಹಾಗೂ ಬೆಡ್​ರೂಮ್​ಗೆ ಸಿಸಿಟಿವಿ ಅಳವಡಿಸಿದ ಭೂಪ!

    ಚುನಾವಣೆಯಲ್ಲಿ ಯಡಿಯೂರಪ್ಪ ಫ್ಯಾಕ್ಟರ್ ವರ್ಕ್ ಆಗಿರುವುದು ಗೊತ್ತಿಲ್ಲ. ಹಾಗಂತ ಅವರು ಎಲ್ಲಿಯಾದರೂ ಹೇಳಿದ್ದಾರೆಯೆ? ಕಾಂಗ್ರೆಸ್​ನ ಗ್ಯಾರಂಟಿಗಳೇ ಸೋಲಿಗೆ ಕಾರಣ. ವೀರಶೈವ-ಲಿಂಗಾಯತ ಸಮುದಾಯದ ಮತಗಳ ವಿಭಜನೆ ಆಗಿದ್ದೇಕೆ? ಎನ್ನುವುದನ್ನು ಹಿರಿಯ ನಾಯಕ ಯಡಿಯೂರಪ್ಪ ಅವರನ್ನೇ ಕೇಳಿ. ನಾನು ಕಿರಿಯ, ಕ್ಷೇತ್ರಕ್ಕೆ ಸೀಮಿತವೆಂದು ವಿ.ಸೋಮಣ್ಣ ಉತ್ತರಿಸಿದರು.

    ಸ್ವಂತ ಹೆಂಡತಿಯ ಬಾತ್​ರೂಮ್ ಹಾಗೂ ಬೆಡ್​ರೂಮ್​ಗೆ ಸಿಸಿಟಿವಿ ಅಳವಡಿಸಿದ ಭೂಪ!

    ನಾವು ಗೆಲ್ಲಲೆಂದೇ ಬಂದವರು… ನಮಗೆ ಸೋಲು ಕ್ಷಣಿಕ: ಬಿ.ಎಲ್.ಸಂತೋಷ್​

    ಮಾಸಾಂತ್ಯಕ್ಕೆ ಹೊಸ ಸಂಸತ್ ಭವನ ಉದ್ಘಾಟನೆ ಸಂಭವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts