More

    ಮತ್ತೆ ಮೂರು ಕಡೆ ತೋಟ ತೆರವು

    ತೀರ್ಥಹಳ್ಳಿ: ತಾಲೂಕಿನ ಬೀಸು ಗ್ರಾಮದಲ್ಲಿ ಅಡಕೆ ಗಿಡಗಳನ್ನು ಕಡಿದ ಪ್ರಕರಣ ತಾರಕಕ್ಕೇರಿರುವ ನಡುವೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಹರಳಿಮಠ ಗ್ರಾಮದಲ್ಲಿ ಮೂರು ಕಡೆ ಒತ್ತುವರಿ ಎನ್ನಲಾದ ಜಾಗದಲ್ಲಿ ನೆಟ್ಟಿದ್ದ ಅಡಕೆ ಗಿಡಗಳನ್ನು ಕಿತ್ತು ಹಾಕಿದ್ದಾರೆ.

    ಮುತ್ತೂರು ಹೋಬಳಿಯ ಹರಳಿಮಠ ಸಮೀಪದ ನೀರುಳ್ಳಿ ಗ್ರಾಮದ ಸ.ನಂ. 114ರಲ್ಲಿ ಮಂಜುನಾಥ್ ಎಂಬುವವರಿಗೆ ಸೇರಿದ ಎರಡು ವರ್ಷದ 400 ಅಡಕೆ ಗಿಡಗಳನ್ನು ಕಿತ್ತಿದ್ದಾರೆ. ಅಲ್ಲದೇ ಕಂಕಳೆ ಗ್ರಾಮದ ತಿಮ್ಮಪ್ಪ ಗೌಡ ಮತ್ತು ಪ್ರವೀಣ್ ಎಂಬುವವರ 500 ಅಡಕೆ ಗಿಡಗಳನ್ನು ಕೂಡ ನಾಶಪಡಿಸಲಾಗಿದೆ.

    ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಈ ರೈತರು ತಮ್ಮ ಖಾತೆ ಜಾಗದಲ್ಲಿರುವ ತೋಟದ ಪಕ್ಕದಲ್ಲೇ ನೆಟ್ಟಿರುವ ಗಿಡಗಳನ್ನು ಅರಣ್ಯ ಇಲಾಖೆಯವರು ನಾಶಪಡಿಸಿದ್ದು ಇದು ಖಂಡನೀಯವಾಗಿದೆ ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಹಾರೋಗುಳಿಗೆ ಪದ್ಮನಾಭ್ ಹಾಗೂ ತಾಪಂ ಸದಸ್ಯ ಕೆಳಕೆರೆ ದಿವಾಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts