More

    ಕುಮಾರಸ್ವಾಮಿ ಬ್ಯಾಕ್​ಗ್ರೌಂಡ್​ ಇವುಗಳಿಗೇನು ಗೊತ್ತು?; ಟೀಕಿಸಿದವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತ್ಯುತ್ತರ

    ಮೈಸೂರು: ಒಂದೆಡೆ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿದ್ದರೆ, ಮತ್ತೊಂದೆಡೆ ತಮ್ಮ ವಿರುದ್ಧ ಕೇಳಿಬಂದಿರುವ ಟೀಕೆಗಳಿಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದ್ದಾರೆ. ಮಾತ್ರವಲ್ಲ, ಕುಮಾರಸ್ವಾಮಿ ಬ್ಯಾಕ್​ಗ್ರೌಂಡ್​ ಇವುಗಳಿಗೇನು ಗೊತ್ತು? ಎಂದೂ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಈ ಮೂಲಕ ಮಾಜಿ ಸಚಿವ ಜಮೀರ್ ಅಹ್ಮದ್​ ಖಾನ್​ಗೆ ತಿರುಗೇಟು ನೀಡಿದ್ದಾರೆ. \

    ನಾನು ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲೇ ನಾಲ್ಕು ವಾರ್ಡ್ ಗಳಲ್ಲಿ ಕಸದ ಟೆಂಡರ್ ತೆಗೆದುಕೊಂಡೆ. ಕಸದ ಟೆಂಡರ್ ತೆಗೆದುಕೊಂಡು ವೃತ್ತಿ ಮಾಡುತ್ತಿದ್ದೆ. ದೇವೇಗೌಡರು ಬೇಡ ಅಂದಾಗ ಅದನ್ನು ಬಿಟ್ಟೆ. ನಂತರ ಮೈಸೂರಿನಲ್ಲಿ ಚಿತ್ರದ ಹಂಚಿಕೆದಾರನಾಗಿ‌ ಕೆಲಸ ಮಾಡಿದೆ. ಸಿನಿಮಾ ದುಡ್ಡನ್ನು ಕಾವೇರಿ ಹೋರಾಟಕ್ಕೆ ಕೊಟ್ಟಿದ್ದೇನೆ. ನಾನು ನನ್ನ ತಂದೆ‌ಯ ನೆರಳಲ್ಲಿ ಬೆಳೆಯಲಿಲ್ಲ. ಬಡ್ಡಿಗೆ ದುಡ್ಡು ತೆಗೆದುಕೊಂಡು ದುಡಿದಿದ್ದೇನೆ. ನಾನು ತಂದೆಯ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಇಂದಿನ‌ ರಾಜಕಾರಣಿಗಳ ರೀತಿ ಹಣ ಮಾಡಿಲ್ಲ ಎಂದಿರುವ ಅವರು, ಕುಮಾರಸ್ವಾಮಿ ಬ್ಯಾಕ್​ಗ್ರೌಂಡ್​ ಇವುಗಳಿಗೇನು ಗೊತ್ತು? ನನ್ನ ಲೆವೆಲ್​ಗೆ ಜಮೀರ್​ ಬಗ್ಗೆ ಮಾತನಾಡಬೇಕಾ? ಎಂದೂ ಕೇಳಿದ್ದಾರೆ.

    ಇದನ್ನೂ ಓದಿ: ಕರ್ತವ್ಯದಲ್ಲಿರುವಾಗ, ಸಮವಸ್ತ್ರ ಧರಿಸಿಕೊಂಡೇ ಪೊಲೀಸರ ಡ್ರಿಂಕ್ಸ್​ ಪಾರ್ಟಿ; ಬಾರ್​ವೊಂದರ ಕೊಠಡಿಯಲ್ಲಿ ಕುಡಿಯುತ್ತಿದ್ದ ವಿಡಿಯೋ ವೈರಲ್​

    ಆನೆ ಹೋಗುತ್ತಿದ್ದರೆ ನಾಯಿಗಳು ಬೊಗಳುತ್ತವೆ. ಅದಕ್ಕೆಲ್ಲ ಉತ್ತರ ಕೊಡಲಿಕ್ಕೆ ಆಗುತ್ತದೆಯಾ? ನಾಲಿಗೆ ಇದೆ ಅಂತ ಹೊಲಸು ಮಾತನಾಡಿದರೆ ಅದಕ್ಕೆ ಉತ್ತರ ಕೊಡೋಕೆ ಆಗುತ್ತಾ? ಎಂದು ಕುಮಾರಸ್ವಾಮಿ ಕೆಲವು ಟೀಕೆಗೆಳಿಗೆ ನಿರ್ಲಕ್ಷ್ಯವೇ ಉತ್ತರ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

    ಸಿಡಿಲ ಹೊಡೆತಕ್ಕೆ ತಲೆ ಸೀಳಿ ಹೋದರೂ ಬದುಕುಳಿದ ರೈತ; ಮತ್ತೊಂದೆಡೆ ಸಿಡಿಲಿನಿಂದಾಗಿ ಇಬ್ಬರು ಹಾಗೂ 13 ಕುರಿಗಳ ಸಾವು…

    ಖ್ಯಾತ ನಿರ್ಮಾಪಕರ ಪುತ್ರ-ನಟನ ಪುಂಡಾಟ; ಯಾರದ್ದೋ ಮನೆಯ ಕೆಲಸದವರ ಮೇಲೆ ಹಲ್ಲೆ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts