ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕುರಿತಾದ ವಿಡಿಯೋವೊಂದು ಹರಿದಾಡುತ್ತಿದೆ ಎಂದು ಹೇಳಿಕೊಂಡಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು, ಆ ಬಗ್ಗೆ ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.
“ಆತ್ಮೀಯ ಹಿತೈಷಿಗಳೇ..
ನನ್ನ ಮಾರ್ಫ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಇರುವುದು ನಾನಲ್ಲ, ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಆ ವಿಡಿಯೋ ಸೃಷ್ಟಿಸಲಾಗಿದೆ ಎಂದು ತಿಳಿಸಲು ಬಯಸುತ್ತೇನೆ.
ಆ ಕುರಿತು ನಾನು ಸೈಬರ್ ಕ್ರೈಂ ಪೊಲೀಸರಿಗೂ ದೂರು ನೀಡಿದ್ದೇನೆ. ಅಪರಾಧಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂಬ ಬಗ್ಗೆ ನನಗೆ ನಂಬಿಕೆ ಇದೆ. ಇನ್ನು ಆ ವಿಡಿಯೋ ಅಪ್ಲೋಡ್ ಅಥವಾ ಫಾರ್ವರ್ಡ್ ಮಾಡದಂತೆ ನ್ಯಾಯಾಲಯದ ತಡೆಯಾಜ್ಞೆ ಇದೆ, ಮಾತ್ರವಲ್ಲ ಅಂಥವರು ಶಿಕ್ಷೆಗೂ ಗುರಿಯಾಗುತ್ತಾರೆ. ಅದಾಗ್ಯೂ ಯಾರಾದರೂ ಹಾಗೆ ಮಾಡಿದರೆ ದಯವಿಟ್ಟು ನನ್ನ ಗಮನಕ್ಕೆ ತನ್ನಿ” ಎಂಬುದಾಗಿ ಸದಾನಂದ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಕೋರಿಕೊಂಡಿದ್ದಾರೆ.
ಎಚ್ಚರಿಕೆ ನೀಡಲು ಚಾಕು ಕೊಂಡೊಯ್ದಿದ್ದ, ಅದೇ ಚೂರಿಗೆ ತಾನೇ ಬಲಿಯಾದ; ‘ಟ್ವಿಸ್ಟ್’ ಕೊಲೆ, ನಾಲ್ವರ ಬಂಧನ