ಜೋಯಿಡಾ: ಹೆಲಿಕಾಪ್ಟರ್ ಮೂಲಕ ಜೆಡಿಎಸ್ ಚುನಾವಣಾ ಪ್ರಚಾರ ಸಭೆ ಹಿನ್ನಲೆ ಜೋಯಿಡಾಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಂಪರ್ಕ ಕೊರತೆ ಉಂಟಾಗಿದೆ.
ಸವದತ್ತಿಯಿಂದ ಜೋಯಿಡಾಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದ ವೇಳೆ ಸಂಪರ್ಕ ಕೊರತೆ ಉಂಟಾಗಿ ಬೇರೆಡೆ ತೆರಳಿದೆ. ನಂತರ ಹೆಲಿಕಾಪ್ಟರ್ ರಾಮನಗರದತ್ತ ತೆರೆಳುತ್ತಿತ್ತು. ಕುಮಾರಸ್ವಾಮಿ ಪ್ರಯಾಣಿಸುತಿದ್ದ ಹೆಲಿಕಾಪ್ಟರ್ 20 ನಿಮಿಷ ಬೇರೆಡೆ ಹಾರಾಡಿದೆ. ಹೆಲಿಪಾಡ್ ಗೆ ಸಿಗ್ನಲ್ ನೀಡದೇ ಗಂಧಕದ ಹೊಗೆ ಹಾಕದೇ ಇರುವುದರಿಂದ ಹೆಲಿಕಾಪ್ಟರ್ ಬೇರೆಡೆ ತೆರಳಿದೆ.
ಇದನ್ನೂ ಓದಿ: ಹೃದಯಾಘಾತದ ಅಪಾಯ; ಈ 5 ಅಂಶಗಳು ನಿಮ್ಮ ಹೃದಯವನ್ನು ಹಾನಿಗೊಳಿಸಬಹುದು..
ವೈರಲೆಸ್ ಮೂಲಕ ಸಂದೇಶ ನೀಡಿ ಸಿಗ್ನಲ್ ರವಾನೆ ಮಾಡಿದ ಬಳಿಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುರಕ್ಷಿತವಾಗಿ ಜೋಯಿಡಾಕ್ಕೆ ಆಗಮಿಸಿದ್ದಾರೆ. ಜೋಯಿಡಾದ ಬಿ.ಜಿಎಸ್ ಕಾಲೇಜು ಮೈದಾನದಲ್ಲಿ ಹಳಿಯಾಳದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಘೋಟ್ನೇಕರ್ ಪರ ಪ್ರಚಾರ ಮಾಡಿದ್ದಾರೆ. ಕುಮಾರಸ್ವಾಮಿಗೆ ಜೋಯಿಡಾದ ಜೆಡಿಎಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದ್ದಾರೆ.
ಏಪ್ರಿಲ್ 30ರಂದು ಕೊಲ್ಲುತ್ತೇನೆ; ಬುಲೆಟ್ ಪ್ರೂಫ್ ಕಾರ್ ಕೊಂಡ ಬೆನ್ನಲ್ಲೇ ಸಲ್ಲು ಭಾಯ್ಗೆ ಮತ್ತೊಮ್ಮೆ ಬೆದರಿಕೆ!