More

    ರಂಗಭೂಮಿಗೆ ಶಿವಕುಮಾರಿ ಕೋಡುಗೆ ಅಪಾರ

    ಯಲಬುರ್ಗಾ: ರಂಗಭೂಮಿ ಕಲಾವಿದೆ ಬಿ.ಶಿವಕುಮಾರಿ ಕೂಡ್ಲಿಗಿ ನಿಧನಕ್ಕೆ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ರಂಗಭೂಮಿ ಕಲಾವಿದರ ಸಂಘದ ತಾಲೂಕು ಘಟಕದಿಂದ ಭಾನುವಾರ ಸಂತಾಪ ಸೂಚಿಸಲಾಯಿತು.

    ಇದನ್ನೂ ಓದಿ:http://ರಂಗಭೂಮಿಗೆ ಶಿವಕುಮಾರಿ ಕೋಡುಗೆ ಅಪಾರ

    ರಂಗಭೂಮಿ ಕಲಾವಿದ ಕಳಕಪ್ಪ ತಳವಾರ್ ಮಾತನಾಡಿ, ಬಿ.ಶಿವಕುಮಾರಿ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿಗೆ ಅಪಾರವಾದ ಕೋಡುಗೆ ನೀಡಿದ್ದಾರೆ. ಅವರ ನಿಧನದಿಂದ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ ಎಂದರು.

    ಕಲಾವಿದ ಶ್ರೀಕಾಂತಗೌಡ ಮಾಲಿಪಾಟೀಲ್ ಮಾತನಾಡಿ, ಶಿವಕುಮಾರಿ ಕೂಡ್ಲಿಗಿ ಹಲವಾರು ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅವರಲ್ಲಿದ್ದ ಶ್ರದ್ಧೆ, ಸಂಮಯ ಬದ್ಧತೆ, ಶಿಸ್ತು ಇತರರಿಗೆ ಮಾದರಿಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts