More

    ಸ್ಪರ್ಧಾಳುಗಳಿಗೆ ಬೆಂಬಲಿಗರ ಸಾಥ್

    ಕನಕಗಿರಿ: ವಿಧಾನಸಭೆ ಚುನಾವಣೆಗೆ ಮೀಸಲು ಕ್ಷೇತ್ರ ಕನಕಗಿರಿಯಿಂದ ಕೊನೆಯ ದಿನ ಗುರುವಾರ ಅಮಾವಾಸ್ಯೆ ಇದ್ದರೂ ಅಭ್ಯರ್ಥಿಗಳು ಪೈಪೋಟಿಯಿಂದ ಉಮೇದುವಾರಿಕೆ ಸಲ್ಲಿಸಿದರು.

    ಬಿಜೆಪಿ ತೊರೆದ ರಾಜಗೋಪಾಲ


    ಬಿಜೆಪಿ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಪಕ್ಷ ತೊರೆದ ರಾಜಗೋಪಾಲ ಜೆಡಿಎಸ್‌ನಿಂದ ಉಮೇದುವಾರಿಕೆ ಸಲ್ಲಿಸಿದರೆ, ಇನ್ನೊಬ್ಬ ಮುಖಂಡ ಧರ್ಮಣ್ಣ ಪಕ್ಷೇತರರಾಗಿ ಕಣಕ್ಕಿಳಿಯಲು ಬಯಸಿ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಅಲ್ಲದೇ, ಪತ್ನಿಗೆ ಕಮಲ ಟಿಕೆಟ್ ಸಿಗದ ಕಾರಣ ಕೆಆರ್‌ಪಿಪಿ ಸೇರಿದ್ದ ತಿಮ್ಮಾರೆಡ್ಡಿ ಗಿಲ್ಲೆಸುಗೂರು, ರೆಡ್ಡಿ ಪಕ್ಷದ ಹುರಿಯಾಳು ಡಾ.ಚಾರುಲ್ ವೆಂಕಟರಮಣ ದಾಸರಿಗೆ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ ಹಾಗೂ ಕೆಆರ್‌ಪಿಪಿ ಹುರಿಯಾಳುಗಳು ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದರು.


    ಬಿಎಸ್‌ಪಿಯಿಂದ ಬೇನಾಳಪ್ಪ, ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದ ರಮೇಶ ಕೋಟೆ, ಆರ್‌ಪಿಐ(ಎ)ನ ಉಷಾ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಹುಲಿಯಪ್ಪ, ಕಲ್ಯಾಣಂ ನಾಗರಾಜ, ನಿವೃತ್ತ ತಹಸೀಲ್ದಾರ್ ಕೆ.ಬಾಲಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಏ.24 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದು, ಯಾರು ಕಣದಲ್ಲಿ ಉಳಿಯುವರು, ಯಾರು ಹಿಂದೆ ಸರಿಯುವರೋ ಕಾದು ನೋಡಬೇಕಿದೆ.

    ಇದನ್ನೂ ಓದಿ: ನಾನು JDS ಬಿಡಲಿಲ್ಲ, ಅವರೇ ಕತ್ತು ಹಿಡಿದು ಹೊರಗೆ ಹಾಕಿದರು: ಎಸ್.ಆರ್.ಶ್ರೀನಿವಾಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts