ನವದೆಹಲಿ: ಕೇರಳದ ಕೋಳಿಕ್ಕೋಡ್ನಲ್ಲಿ ದುರಂತಕ್ಕೀಡಾದ ವಿಮಾನವನ್ನು ರನ್ವೇಯಲ್ಲಿ ಇಳಿಸಲು ಎರಡು ಬಾರಿ ಪ್ರಯತ್ನಿಸಲಾಗಿತ್ತು…!
ದುಬೈಯಿಂದ ಆಗಮಿಸಿದ್ದ ಏರ್ ಇಂಡಿಯಾ ಏಕ್ಸ್ಪ್ರೆಸ್ ವಿಮಾನದಲ್ಲಿ ಒಟ್ಟು 174 ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್ಗಳು ಸೇರಿ 6 ಸಿಬ್ಬಂದಿ ಇದ್ದರು. ಸಂಜೆ 7.40 ಕ್ರ್ಯಾಷ್ ಲ್ಯಾಂಡಿಂಗ್ ಆದ ವಿಮಾನ ಕಮರಿಗೆ ಬಿದ್ದು ಎರಡು ತುಂಡಾಗಿದೆ.
ಮಂಗಳೂರಿನಂತೆ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿರುವ ಕೋಳಿಕ್ಕೋಡ್ನ ನಿಲ್ದಾಣದ ರನ್ವೇಯಲ್ಲಿ ವಿಮಾನವನ್ನು ಇಳಿಸಲು ಪೈಲಟ್ ಎರಡು ಬಾರಿ ಪ್ರಯತ್ನಿಸಿದ್ದಾಗಿ ಗ್ಲೋಬಲ್ ಫ್ಲೈಟ್ ಟ್ರ್ಯಾಕರ್ ವೆಬ್ಸೈಟ್ ವರದಿ ಮಾಡಿದೆ.
ಫ್ಲೈಟ್ ರಾಡಾರ್ 24 ಎಂಬ ಸ್ವಿಡಿಷ್ ಕಂಪನಿ ಈ ಮಾಹಿತಿ ನೀಡಿದೆ. ಇದು ವಾಣಿಜ್ಯ ವಿಮಾನಗಳ ರಿಯಲ್ ಟೈಮ್ ಮಾಹಿತಿಯನ್ನು ನೀಡುತ್ತದೆ.
ವಿಮಾನ ಇಳಿಸುವ ಸಮಯದಲ್ಲಿ ಭಾರಿ ಮಳೆ ಸುರಿಯುತ್ತಿತ್ತು ಎನ್ನಲಾಗಿದೆ. ಅಲ್ಲದೇ, ವಿಸಿಬಿಲಿಟಿ ಕೂಡ ಕೂಡ ಕಡಿಮೆಯಿತ್ತು. ಈ ಎಲ್ಲ ಕಾರಣಗಳಿಂದಾಗಿ ಸೂಕ್ತವಾಗಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೇ ದುರಂತ ಸಂಭವಿಸಿರಬಹುದು ಎಂದು ಹೇಳಲಾಗಿದೆ.
ಪಾಕ್ ವಿಮಾನದ ಕಥೆಯೂ ಇದೇ ಆಗಿತ್ತು; ಇಳಿಯುವ ಕೆಲ ಕ್ಷಣಗಳ ಮುನ್ನ ಸಂಭವಿಸಿದ್ದ ದುರಂತ; 98 ಮಂದಿ ಬಲಿ