More

    ಬೆಸ್ಕಾಮ್​ಗೆ ವಂಚನೆ ಮಾಡಿದ್ದವರಿಗೆ ಎಫ್​ಐಆರ್​ ಶಾಕ್​; ನಕಲಿ ಅಂಕಪಟ್ಟಿ ಸಲ್ಲಿಸಿದ್ದರು ನಾಲ್ವರು ಲೈನ್​ಮ್ಯಾನ್​

    ಬೆಂಗಳೂರು: ಬೆಸ್ಕಾಮ್​​ಗೆ ನಕಲಿ ಅಂಕಪಟ್ಟಿ ಸಲ್ಲಿಸಿ ವಂಚನೆ ಮಾಡಿದ್ದ ನಾಲ್ವರು ಲೈನ್​ಮ್ಯಾನ್​ಗಳಿಗೆ ಎಫ್​ಐಆರ್ ಮೂಲಕ ಶಾಕ್​ ತಗುಲಿದೆ. ಅರ್ಥಾತ್​, ಬೆಸ್ಕಾಮ್​ಗೆ ನಕಲಿ ಅಂಕಪಟ್ಟಿ ಸಲ್ಲಿಸಿ ಲೈನ್‌ಮ್ಯಾನ್ ಹುದ್ದೆ ಗಿಟ್ಟಿಸಿಕೊಂಡಿದ್ದ ನಾಲ್ವರ ವಿರುದ್ಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

    ಬೆಸ್ಕಾಮ್​​ನ ಎಚ್‌ಎಸ್‌ಆರ್ ಲೇಔಟ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಎಲ್. ಜ್ಯೋತಿ ಪ್ರಕಾಶ್ ಅವರು, ಈ ಕುರಿತು ದೂರು ನೀಡಿದ್ದರು. ಆ ದೂರಿನ ಮೇರೆಗೆ ಲೈನ್‌ಮ್ಯಾನ್‌ಗಳಾದ ಆನಂದ ಖುಡೆ, ಎನ್. ಸುಬ್ರಮಣಿ, ಡಿ.ಸಿ. ಚಂದ್ರಶೇಖರ ಮತ್ತು ಶ್ರೀಕಾಂತ ಬಡಿಗೇರ ಎಂಬುವರ ವಿರುದ್ಧ ಎಫ್​ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಸಹಾಯಕ ಲೈನ್‌ಮ್ಯಾನ್ ಹುದ್ದೆಗೆ ನೇಮಕಾತಿ ವೇಳೆ ಈ ನಾಲ್ವರು ಆರೋಪಿಗಳು ನಕಲಿ ಅಂಕಪಟ್ಟಿ ಸಲ್ಲಿಸಿ ಬೆಸ್ಕಾಮ್​ಗೆ ನಂಬಿಸಿ ವಂಚನೆ ಮಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಬೇಕೆಂದು ದೂರುದಾರರು ಮನವಿ ಮಾಡಿದ್ದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ್ದವನಿಗೆ 10 ವರ್ಷ ಜೈಲು; ಒಬ್ಬನ ಮೇಲೆಯೇ 21 ಪೋಕ್ಸೋ ಪ್ರಕರಣಗಳು

    ‘ಕಾಲೂರಲು’ ಸಿಗದ ‘ಬೆಂ’ಬಲ; ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts