More

    ಖತರ್ನಾಕ್ ಡಾಕ್ಟರ್​ ಈಗ ಅಂದರ್​; ಏನ್​ ಮಾಡ್ತಿದ್ದ ಗೊತ್ತಾ?

    ಅಹಮದಾಬಾದ್​: ಅನಾರೋಗ್ಯ ಸಮಸ್ಯೆ ಸರಿಹೋಗಬೇಕಿದ್ದರೆ ಡಾಕ್ಟರ್ ಬಳಿಗೆ ಹೋಗುತ್ತೇವೆ. ಆದರೆ ಇಲ್ಲೊಬ್ಬರು ಡಾಕ್ಟರ್ ತಮ್ಮ ಸಮಸ್ಯೆ ಪರಿಹಾರಕ್ಕೆ ಖತರ್ನಾಕ್​ ಐಡಿಯಾದ ಮೊರೆ ಹೋಗುತ್ತಿದ್ದರು. ಹೀಗೊಂದು ಭಯಂಕರ ಐಡಿಯಾ ಮಾಡಿರುವ ಡಾಕ್ಟರ್ ಕೊನೆಗೂ ಸಿಕ್ಕಿಬಿದ್ದಿದ್ದು ಬಂಧನಕ್ಕೆ ಒಳಗಾಗಿದ್ದಾರೆ.

    ಡಾ. ವಿಜಯ್​ ಪಾರಿಖ್​ ಎಂಬ ಹೆಸರಿನ ಈ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತ್​ನ ಅಮ್ರೇಲಿ ನಿವಾಸಿಯಾಗಿರುವ ಈ ವೈದ್ಯ, ಸರ್ಕಾರದ ಮಟ್ಟದಲ್ಲಿ ತನ್ನ ಕೆಲಸಗಳು ಸರಿಯಾಗಿ ಆಗುವಂತೆ ನೋಡಿಕೊಳ್ಳಲು ಪ್ರಧಾನಿ ಕಾರ್ಯಾಲಯವನ್ನೇ ಬಳಸಿಕೊಳ್ಳುತ್ತಿದ್ದ. ಹಾಗಂತ ಸನ್ಮಾರ್ಗದಲ್ಲಿ ಅಲ್ಲ.. ಅದಕ್ಕಾಗಿ ಆತ ಅಡ್ಡದಾರಿ ಹಿಡಿದಿದ್ದ.

    ಅಂದರೆ ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳ ಹೆಸರಿನಲ್ಲಿ ಇ-ಮೇಲ್ ಕ್ರಿಯೇಟ್ ಮಾಡಿ, ಅದರ ಮೂಲಕ ಗುಜರಾತ್​ ಸರ್ಕಾರಿ ಅಧಿಕಾರಿಗಳಿಗೆ ಇ-ಮೇಲ್ ಕಳಿಸಿ, ತನ್ನ ಕೆಲಸಗಳನ್ನು ಸರಾಗವಾಗಿ ಮಾಡಿಸಿಕೊಳ್ಳುತ್ತಿದ್ದ. ಆದರೆ ಐಪಿಎಸ್​ ಅಧಿಕಾರಿಯೂ ಆಗಿರುವ ಒಬ್ಬ ಹಿರಿಯ ಅಧಿಕಾರಿಗೆ ಹೀಗೆ ಇ-ಮೇಲ್ ಕಳಿಸಿ ಈ ವೈದ್ಯ ಸಿಕ್ಕಿಬಿದ್ದಿದ್ದಾನೆ.

    ಪಾರಿಖ್​ ಅಹಮದಾಬಾದ್​ನ ಪಾರಿಮಲ್ ಗಾರ್ಡನ್ ಪ್ರದೇಶದಲ್ಲಿ ನಿಶಿತ್ ಷಾ ಅವರಿಂದ ಎರಡು ಕಚೇರಿಗಳನ್ನು ಖರೀದಿಸಿದ್ದು, ಬಳಿಕ ಷಾ ಅದನ್ನು ಹಸ್ತಾಂತರಿಸಿಲ್ಲ ಎಂದು ಮೇಲ್​ನಲ್ಲಿ ಹೇಳಲಾಗಿತ್ತು. ಈ ಸಂಬಂಧ ಪಾರಿಖ್​ ಪ್ರಧಾನಿ ಕಾರ್ಯಾಲಯಕ್ಕೆ ಇ-ಮೇಲ್ ಮಾಡಿದ್ದು, ಕಚೇರಿ ಸ್ಥಳ ಬಿಟ್ಟುಕೊಡುವಂತೆ ಹಾಗೂ ಆ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಮತ್ತು ಈ ಎಲ್ಲ ಬೆಳವಣಿಗೆಗಳನ್ನು ಪ್ರಧಾನಿ ಗಮನಿಸುತ್ತಾರೆ ಎಂದೂ ಉಲ್ಲೇಖಿಸಿರುವ ಸೂಚನೆ ಇ-ಮೇಲ್ ಮೂಲಕ ಅಧಿಕಾರಿಗಳಿಗೆ ರವಾನೆ ಆಗಿತ್ತು. ಆದರೆ ಸೈಬರ್ ಕ್ರೈಮ್​ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿದಾಗ ಸ್ವತಃ ಪಾರಿಖ್​ ಈ ಮೇಲ್​ಗಳನ್ನು ಕಳುಹಿಸಿದ್ದು ತಿಳಿದುಬಂದಿತ್ತು.

    ಅಲ್ಲಿ ಪೊಲೀಸರೇ ಬಾಗಿಲು ಮುರಿಯಲೆತ್ನಿಸಿದ್ದೇಕೆ?; ಪೊಲೀಸರ ವಿರುದ್ಧವೇ ತಿರುಗಿ ಬಿದ್ದ ಜಿಮ್ ಮಾಲೀಕ!

    ಹಸೆಮಣೆ ಏರಬೇಕಿದ್ದ ವರ ದಿಬ್ಬಣ ಸಮೇತ ಬೀದಿಗಿಳಿದ; ಅದಕ್ಕೆ ಕಾರಣ ಒಬ್ಬಿಬ್ಬರಲ್ಲ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts