More

    ಆಸ್ತಿಗಾಗಿ ಸಹೋದರರ ನಡುವೆ ಕಲಹ ಕೊಲೆಯಲ್ಲಿ ಅಂತ್ಯ

    ಸುಳ್ಯ: ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಜಗಳವಾಗಿ ಓರ್ವ ಕೊಲೆಯಾದ ಘಟನೆ ಶುಕ್ರವಾರ ನಡೆದಿದೆ.

    ಪುತ್ತೂರಿನ ಸಂಪ್ಯ ನಿವಾಸಿ ಉಸ್ಮಾನ್ ಕೊಲೆಯಾದವರು. ಸತ್ತಾರ್, ರಫೀಕ್, ಇಸುಬು, ಅಬ್ಬಾಸ್, ಉಸ್ಮಾನ್ ಎಂಬ ಅಣ್ಣತಮ್ಮಂದಿರ ಸುಮಾರು 50 ಎಕರೆ ಕೃಷಿಭೂಮಿ ಕುದ್ರೆಪಾಯದಲ್ಲಿದೆ. ಈ ಜಾಗದ ಹಂಚಿಕೆ ಕುರಿತಂತೆ ಸಹೋದರರ ನಡುವೆ ಭಿನ್ನಾಭಿಪ್ರಾಯವಿತ್ತು. ಶುಕ್ರವಾರ ಬೆಳಗ್ಗೆ ಕಲಹವೇರ್ಪಟ್ಟು ಸಹೋದರರು ಸೇರಿ ಉಸ್ಮಾನ್ ಅವರನ್ನು ಚೂರಿಯಿಂದ ಇರಿದು ಕೊಲೆಗೈದಿದ್ದಾರೆ. ಸಂಪಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts