More

    ಕೋಲಾರ | ಚಾಕು ಇರಿದು ಮಗನನ್ನೇ ಹತ್ಯೆಗೈದ ತಂದೆ!

    ಕೋಲಾರ: ತಂದೆಯೇ ಮಗನನ್ನು ಚಾಕುವಿನಿಂದ ಚುಚ್ಚಿ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಮುಳಬಾಗಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ. ಭುವನ್ (9) ಕೊಲೆಯಾದ ಬಾಲಕ.

    ತಂದೆ ಬಾಲಸುಬ್ರಹ್ಮಣ್ಯಂ ತನ್ನ ಮಗ ಭುವನ್​ನನ್ನು ಕೊಲೆ ಮಾಡಿದ್ದಾನೆ. ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿರುವ ಆರೋಪಿ, ಇತ್ತೀಚೆಗೆ ಪತ್ನಿಯನ್ನೂ ಕೊಲೆಗೈದು ಜೈಲಿಗೆ ಹೋಗಿ ಬಂದಿದ್ದ. ಇದೀಗ ತನ್ನ ಮಗ ಭುವನ್​ನನ್ನೂ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಒಂದೇ ಒಂದು ತಪ್ಪಿನಿಂದ ಹೊತ್ತಿ ಉರಿದ ಮೊಬೈಲ್ ಅಂಗಡಿ; ರಾತ್ರಿಯಿಡೀ ಮೊಬೈಲ್ ಚಾರ್ಚ್​ ಇಡುವ ಮುನ್ನ ಎಚ್ಚರ!

    ತಾಯಿಯ ಸಾವಿನ ಬಳಿಕ ಭುವನ್ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದ. ಈ ನಡುವೆ ತಂದೆ ಸುಬ್ರಹ್ಮಣ್ಯಂ ಮಗನಲ್ಲಿ ತನ್ನೊಂದಿಗೆ ಬರುವಂತೆ ಆಗಾಗ ಒತ್ತಾಯಿಸುತ್ತಿದ್ದ. ಇದಕ್ಕೆ ಭುವನ್ ಒಪ್ಪದೇ ಇರುವುದಕ್ಕೆ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ.

    ಸುಬ್ರಹ್ಮಣ್ಯಂ ತನ್ನ ಮಗನಿಗೇ ಚೂರಿ ಇರಿದಿರುವುದು ಗೊತ್ತಾಗುತ್ತಿದ್ದಂತೆ, ಭುವನ್​ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಾಗಲೇ ಬಾಲಕ ಪ್ರಾಣ ಹಾರಿ ಹೋಗಿದೆ. ಸುತ್ತಮುತ್ತಲ ಮನೆಯವರು ಆರೋಪಿ ಸುಬ್ರಹ್ಮಣ್ಯಂನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ,​ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ | 30 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಶಾಲಾ ಬಸ್​ಗೆ ಬೆಂಕಿ; ತಪ್ಪಿದ ಅನಾಹುತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts