More

    ನೀರಲ್ಲಿ ಮುಳುಗುತ್ತಿದ್ದ ನಾಯಿಮರಿಯನ್ನು ರಕ್ಷಿಸಲು ಹೋದ ಅಪ್ಪ-ಮಗನಿಗೇ ಚೂರಿಯಿಂದ ಇರಿದರು..!!!

    ಬೆಂಗಳೂರು: ಅಯ್ಯೋ ಪಾಪ ಎಂದು ಒಂದೊಳ್ಳೆಯ ಕೆಲಸ ಮಾಡಲು ಹೋಗಿ ಸ್ವತಃ ಅವರೇ ಇನ್ನೊಬ್ಬರ ಬಳಿ ಅಯ್ಯೋ ಪಾಪ ಎಂದೆನಿಸಿಕೊಳ್ಳುವಂಥ ಪ್ರಕರಣವಿದು. ನೀರಲ್ಲಿ ಮುಳುಗೇಳುತ್ತಿದ್ದ ನಾಯಿಮರಿಯೊಂದನ್ನು ರಕ್ಷಿಸಲು ಹೋದ ಅಪ್ಪ-ಮಗನಿಗೇ ದುಷ್ಕರ್ಮಿಗಳು ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ.

    ಮನೆಗೆ ಸಮೀಪದ ಕಾಲುವೆ ಬಳಿ ನೀರಲ್ಲಿ ಮುಳುಗುತ್ತಿದ್ದ ನಾಯಿಮರಿಯೊಂದು ರಕ್ಷಣೆಗಾಗಿ ದೈನ್ಯವಾಗಿ ಬೊಗಳುತ್ತಿದ್ದುದನ್ನು ಕೇಳಿ ತಂದೆ-ಮಗ ಇಬ್ಬರೂ ಕಾರು ತೆಗೆದುಕೊಂಡು ಹೋಗಿ, ಅದರ ಹೆಡ್​ಲೈಟ್​ ಬೆಳಕು ನಾಯಿ ಇದ್ದ ಜಾಗದ ಮೇಲೆ ಬೀಳುವಂತೆ ರಕ್ಷಣೆಗೆ ತೆರಳಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಆ ದಾರಿಯಾಗಿ ಮತ್ತೊಂದು ಕಾರ್​ನಲ್ಲಿ ಬಂದ ನಾಲ್ವರು ತುಂಬ ಪದೇಪದೆ ಹಾರ್ನ್​ ಮಾಡಿದ್ದಾರೆ. ಪಕ್ಕದಲ್ಲಿ ಇನ್ನೊಂದು ಕಾರು ಹೋಗುವಷ್ಟು ಜಾಗವಿದ್ದರೂ ತಕರಾರು ತೆಗೆದ ಅಪರಿಚಿತರು ಬಳಿಕ ಅಪ್ಪ-ಮಗನಿಗೆ ಚೂರಿಯಿಂದ ಇರಿದಿದ್ದಾರೆ.

    ಇದನ್ನೂ ಓದಿ: ಒಬ್ಬನಿಗೆ ಒಂದೇ ಸಲಕ್ಕೆ ಅಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಿಲ್ಲ; ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್​ ಅಭಿಪ್ರಾಯವಿದು… 

    ಅಂದಹಾಗೆ ಶುಕ್ರವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಕುನ್ವರ್ ಸಿಂಗ್ ಹಾಗೂ ಅವರ ಪುತ್ರ ಸಾಗರ್ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್​ನ ಕೋಲಾರ ಎಂಬಲ್ಲಿನ ಕಾಲುವೆ ಬಳಿ ಈ ಪ್ರಕರಣ ನಡೆದಿದೆ. ತಂದೆ ಕುನ್ವರ್ ಸಿಂಗ್​ಗೆ ಇರಿಯುತ್ತಿದ್ದುದನ್ನು ತಪ್ಪಿಸಲು ಮುಂದಾದ ಪುತ್ರ ಸಾಗರ್ ಎದೆಗೂ ದುಷ್ಕರ್ಮಿಗಳು ಚುಚ್ಚಿದ್ದು ಗಂಭೀರ ಗಾಯಗಳಾಗಿವೆ. ಸಿಂಗ್ ಅವರ ಬಲಗಣ್ಣು, ಬೆನ್ನು-ಹೊಟ್ಟೆಯ ಮೇಲೆ ಗಾಯಗಳಾಗಿವೆ. ಕೂಗಾಟ-ಚೀರಾಟ ಕೇಳಿ ಸೆಕ್ಯುರಿಟಿ ಗಾರ್ಡ್​ಗಳಾದ ಮಿಲಿಂದ್ ಅಧ್ವಾನಿ ಹಾಗೂ ಪ್ರಕಾಶ್ ಸಿಂಗ್ ರಕ್ಷಣೆಗೆ ಧಾವಿಸುತ್ತಿದ್ದಂತೆ ದುಷ್ಕರ್ಮಿಗಳು ಪಾರಾಗಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)

    ಮೈಮೇಲೆ ಕೂದಲು ಹೆಚ್ಚಿಗೆ ಇದ್ದರೆ, ಋತುಸ್ರಾವ ಏರುಪೇರಾದರೆ ಮಕ್ಕಳಾಗುವುದಿಲ್ಲವೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts