ಬೆಂಗಳೂರು: ಕೃಷಿಕರೊಬ್ಬರು ಅಡಕೆ ಮಾರಾಟ ಮಾಡಿದ್ದ 26.5 ಲಕ್ಷ ರೂ.ಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಜೆ ಪಾರ್ಕ್ ಇನ್ಸ್ಪೆಕ್ಟರ್ ಯೊಗೇಶ್ ಕುಮಾರ್ರನ್ನು ಅಮಾನತು ಮಾಡಿ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಸದ್ಯ ಇನ್ಸ್ಪೆಕ್ಟರ್ ಯೊಗೇಶ್ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ದರೋಡೆ ಮಾಡಿದ ಹಣದಲ್ಲಿ ಸಬ್ ಇನ್ಸ್ಪೆಕ್ಟರ್ ಜೀವನ್ ಕುಮಾರ್, ಯೋಗೇಶ್ ಅವರಿಗೆ 6 ಲಕ್ಷ ರೂ. ನೀಡಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಣ ನೀಡಿರುವುದು ಬಯಲಿಗೆ ಬಂದಿತ್ತು.
ಸಿಟಿ ಮಾರುಕಟ್ಟೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಜೀವನ್ ಕುಮಾರ್ ವಿಚಾರಣೆ ನಡೆದಿತ್ತು. ಈ ವೇಳೆ ಹಣ ನೀಡಿರುವುದಾಗಿ ಜೀವನ್ ಬಾಯ್ಬಿಟ್ಟಿದ್ದರು. ಹೀಗಾಗಿ ದರೋಡೆಗೆ ಸಹಕರಿಸಿದ ಆರೋಪದ ಮೇಲೆ ಯೋಗೇಶ್ ಅವರನ್ನು ಪೊಲೀಸ್ ಆಯುಕ್ತ ಕಮಲ್ ಪಂತ್ ಅಮಾನತು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)
26 ಲಕ್ಷ ದರೋಡೆ ಮಾಡಿದ್ದ ಪ್ರಕರಣ: ಎಸ್ಐ ಗ್ಯಾಂಗ್ನಲ್ಲಿ ಪೇದೆ, ಮತ್ತೆ ನಾಲ್ವರ ಸೆರೆ!