More

    ಕೃಷಿಕರೊಬ್ಬರ ಅಡಕೆ ಮಾರಾಟ ಹಣ ದರೋಡೆ ಪ್ರಕರಣ: ಇನ್ಸ್​ಪೆಕ್ಟರ್​ಗೆ ಪೊಲೀಸ್​ ಆಯುಕ್ತರ ಶಾಕ್​!

    ಬೆಂಗಳೂರು: ಕೃಷಿಕರೊಬ್ಬರು ಅಡಕೆ ಮಾರಾಟ ಮಾಡಿದ್ದ 26.5 ಲಕ್ಷ ರೂ.ಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​.ಜೆ ಪಾರ್ಕ್ ಇನ್ಸ್​ಪೆಕ್ಟರ್​ ಯೊಗೇಶ್​ ಕುಮಾರ್​ರನ್ನು​ ಅಮಾನತು ಮಾಡಿ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಆದೇಶ ಹೊರಡಿಸಿದ್ದಾರೆ.

    ಸದ್ಯ ಇನ್ಸ್​ಪೆಕ್ಟರ್​ ಯೊಗೇಶ್ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ದರೋಡೆ ಮಾಡಿದ ಹಣದಲ್ಲಿ ಸಬ್​ ಇನ್ಸ್​ಪೆಕ್ಟರ್​ ಜೀವನ್ ಕುಮಾರ್, ಯೋಗೇಶ್​ ಅವರಿಗೆ 6 ಲಕ್ಷ ರೂ. ನೀಡಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಣ ನೀಡಿರುವುದು ಬಯಲಿಗೆ ಬಂದಿತ್ತು.

    ಸಿಟಿ ಮಾರುಕಟ್ಟೆ ಇನ್ಸ್​ಪೆಕ್ಟರ್​ ಕುಮಾರಸ್ವಾಮಿ ನೇತೃತ್ವದಲ್ಲಿ ಸಬ್ ಇನ್ಸ್​ಪೆಕ್ಟರ್​ ಜೀವನ್ ಕುಮಾರ್ ವಿಚಾರಣೆ ನಡೆದಿತ್ತು. ಈ ವೇಳೆ ಹಣ ನೀಡಿರುವುದಾಗಿ ಜೀವನ್​ ಬಾಯ್ಬಿಟ್ಟಿದ್ದರು. ಹೀಗಾಗಿ ದರೋಡೆಗೆ ಸಹಕರಿಸಿದ ಆರೋಪದ ಮೇಲೆ ಯೋಗೇಶ್​ ಅವರನ್ನು ಪೊಲೀಸ್​ ಆಯುಕ್ತ ಕಮಲ್​ ಪಂತ್​ ಅಮಾನತು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    26 ಲಕ್ಷ ದರೋಡೆ ಮಾಡಿದ್ದ ಪ್ರಕರಣ: ಎಸ್​ಐ ಗ್ಯಾಂಗ್​ನಲ್ಲಿ ಪೇದೆ, ಮತ್ತೆ ನಾಲ್ವರ ಸೆರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts