ಜೈಪುರ: ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಆರ್ಸಿಬಿ ತನ್ನ ಸೋಲಿನ ಸ್ಟ್ರೀಕ್ಅನ್ನು ಮುಂದುವರೆಸಿದ್ದು, ರಾಜಸ್ಥಾನ ಲೀಗ್ನಲ್ಲಿ ಸತತ ನಾಲ್ಕನೇ ಜಯವನ್ನು ದಾಖಲಿಸಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ಹಾಲಿ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.
ರಾಜಸ್ಥಾನ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿರಾಟ್ ಕೊಹ್ಲಿ (113 ರನ್, 72 ಎಸೆತ, 12 ಬೌಂಡರಿ, 4 ಸಿಕ್ಸರ್) ಶತಕದ ಫಲವಾಗಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡವು ಜೋಸ್ಟ್ ಬಟ್ಲರ್ (100 ರನ್, 58 ಎಸೆತ, 9 ಬೌಂಡರಿ, 4 ಸಿಕ್ಸರ್), ಸಂಜು ಸ್ಯಾಮ್ಸನ್ (69 ರನ್, 42 ಎಸೆತ, 8 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಗುರಿಯನ್ನು 19.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು. ಈ ಬಗ್ಗೆ ನಾಯಕ ಫಾಫ್ ಡು ಪ್ಲೆಸಿಸ್ ಮಾತನಾಡಿದ್ದು, ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ತನ್ನ ಕೈ ಬೆರಳನ್ನೇ ದೇವಿಗೆ ಅರ್ಪಿಸಿದ ವ್ಯಕ್ತಿ
ವಿರಾಟ್ ಬ್ಯಾಟಿಂಗ್ ಮಾಡುವಾಗ ನಾವು ಟ್ರಿಕಿ ಮತ್ತು ಲೋ ಎಂದು ಕಂಡುಕೊಂಡೆವು 190ಕ್ಕಿಂತ ಹೆಚ್ಚಿನ ರನ್ ಉತ್ತಮ ಸ್ಕೋರ್ ಎಂದು ಭಾವಿಸಿದ್ದೆವು. ನಾವು 10ರಿಂದ 15 ರನ್ ಕಡಿಮೆ ಗಳಿಸಿದ ಕಾರಣ ನಾವು ಸೋಲಬೇಕಾಯ್ತು. ಒಂದು ಕಡೆ ವಿರಾಟ್ ಉತ್ತಮವಾಗಿ ಆಡಿದರು ಇನ್ನೊಂದೆಡೆ ಗ್ರೀನ್ ಬದಲಿಗೆ ಬೇರೆ ಆಟಗಾರರು ತೆರಳಿದ್ದರೆ ನಾವು ಇನ್ನಷ್ಟು ರನ್ಗಳನ್ನು ಗಳಿಸಬಹುದಿತ್ತು. ಪಿಚ್ ಸಾಕಷ್ಟು ಟ್ರಕಿ ಆಗಿದ್ದ ಕಾರಣ ನಾವು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ.
ಪವರ್ಪ್ಲೇನ ಕೊನೆಯ ಓವರ್ನಲ್ಲಿ ಮಯಾಂಕ್ ದಗಾರ್ ಅವರ ಬೌಲಿಂಗ್ ಪಂದ್ಯದ ದಿಕ್ಕನ್ನೇ ಬದಲಿಸಿತ್ತು. ಅವರು ಪಂದ್ಯವನ್ನು ಗೆಲ್ಲಲು ಉತ್ತಮವಾದ ಟಾಸ್ ಎಂದು ನಾನು ಭಾವಿಸಿದೆ. ಒಂದೇ ಓವರ್ನಲ್ಲಿ 20 ರನ್ಗಳನ್ನು ಬಿಟ್ಟುಕೊಟ್ಟಿದ್ದು, ನಮ್ಮ ಮೇಲೆ ಮತ್ತಷ್ಟು ಒತ್ತಡವನ್ನು ಹೆಚ್ಚಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಬಲಗೈ ಬ್ಯಾಟ್ಸಮನ್ಗಳು ಜಾಸ್ತಿ ಇರುವ ಕಾರಣ ನಾನು ಮಯಾಂಕ್ ಅವರ ಬಳಿ ಬಾಲ್ ನೀಡಿದ್ದೆ. ಅಂತಿಮವಾಗಿ ಅದು ಪಂದ್ಯದ ದಿಕ್ಕನ್ನೇ ಬದಲಿಸಿತ್ತು. ನಾವು ಸೋಲು ಒಪ್ಪಿಕೊಳ್ಳಬೇಕಾಯಿತು. ಮುಂದಿನ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಲಿದ್ದೇವೆ ಎಂದು ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.