ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಪರ ಮತ್ತು ವಿರುದ್ಧ ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರ ವೇಳೆಯಲ್ಲಿ ಗಲಭೆಕೋರರಿಗೆ ಹಂಚಲು ಹಣವನ್ನು ಬಾಳೆಹಣ್ಣಿನಲ್ಲಿ ಇಟ್ಟು ಕಳುಹಿಸಲಾಗುತ್ತಿದೆ ಎಂದು ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಬಾಳೆಹಣ್ಣಿನಲ್ಲಿ ಅಡಗಿಸಿಟ್ಟಿದ್ದ 2 ಸಾವಿರ ಮತ್ತು 500 ರೂ. ಕರೆನ್ಸಿಯನ್ನು ತೆಗೆಯುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಣವನ್ನು ದೆಹಲಿ ಗಲಭೆಗೆ ಬಳಸಲು ವಿವಿಧೆಡೆಯಿಂದ ಕಳುಹಿಸಲಾಗುತ್ತಿದೆ ಎಂದು ಸುದ್ದಿಯಾಗಿತ್ತು.
ಬಾಳೆಹಣ್ಣಿನಿಂದ ಹೊರ ತೆಗೆವ ವಿಡಿಯೋಗೆ ಇಲ್ಲಿ ನೋಡಿ ದೆಹಲಿ ಹಿಂಸಾಚಾರಕ್ಕೆ ಸಿದ್ಧತೆ ಹೇಗಿದೆ ಎಂದು ಬರೆಯಲಾಗಿತ್ತು. ಇನ್ನೊಂದರಲ್ಲಿ ದೆಹಲಿ ಹಿಂಸಾಚಾರವನ್ನು ಹೀಗೆ ಬಾಳೆಹಣ್ಣಿನಲ್ಲಿ ಬಚ್ಚಿಡಲಾಗಿದೆ ಎಂದು ಬರೆಯಲಾಗಿತ್ತು. ಈ ವಿಡಿಯೋ 13 ಸಾವಿರ ಮಂದಿ ಹಂಚಿಕೊಂಡಿದ್ದರು ಮತ್ತು 8 ಸಾವಿರ ಮಂದಿ ಲೈಕ್ ಮಾಡಿದ್ದರು.
ಆದರೆ ಇಂಡಿಯಾ ಟುಡೇ ಫ್ಯಾಕ್ಟ್ಚೆಕ್ನಲ್ಲಿ ಪತ್ತೆ ಹಚ್ಚಿದಂತೆ ಇಂದು 2 ವರ್ಷಗಳ ಹಳೇ ವಿಡಿಯೋ. ಅಲ್ಲದೆ ಇದನ್ನು ಹಣದ ಕಳ್ಳ ಸಾಗಣೆ ಮಾಡುವಾಗ ವಿಡಿಯೋ ತೆಗೆಯಲಾಗಿತ್ತು. ಆದರೆ ಯಾವಾಗ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.
ವಿಡಿಯೋ ಜಾಲ ಹಿಡಿದು ಪತ್ತೆ ಹಚ್ಚಲು ಹೊರಟವರಿಗೆ ತಿಳಿದಿದ್ದು ಈ ಸುದ್ದಿಯು 2017 ಅಕ್ಟೋಬರ್ 31ರಂದು ಡೈಲಿ ಭಾಸ್ಕರದಲ್ಲಿ ಪ್ರಕಟವಾಗಿತ್ತು ಎಂಬುದು. ಆ ವರದಿ ಪ್ರಕಾರ ಹಣವನ್ನು ಕದ್ದು ಬಳಸಲು ಹೀಗೆ ಬಾಳೆ ಹಣ್ಣಿನಲ್ಲಿ ಇಡಲಾಗಿತ್ತು.
ಆದರೆ ಆ ವರದಿಯಲ್ಲಿಯೇ ತಿಳಿಸಿದಂತೆ ಇದನ್ನು ರೆಕಾರ್ಡ್ ಮಾಡಿದ್ದು ಯಾರು ಎಂಬುದು ತಿಳಿದು ಬಂದಿಲ್ಲ. ಅಲ್ಲದೆ ಇದು ಯಾವ ಸ್ಥಳ ಎಂಬುದು ಪತ್ತೆಯಾಗಿಲ್ಲ. ಆದರೆ ಇದು ಪಾಕಿಸ್ತಾನದ ಮೂಲದ್ದು ಎಂಬುದು ಸ್ಪಷ್ಟವಾಗಿತ್ತು.
2017ರ ಫೆಬ್ರವರಿಯಲ್ಲಿಯೂ ಇಂತಹ ಹಣ ಸಾಗಣೆಯ ಇನ್ನೊಂದು ವರದಿ ಪತ್ತೆಯಾಗಿತ್ತು. ಅದರಲ್ಲಿ ಕೇರಳದ ಕರಿಪುರ್ ಎಂಬಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು ಎಂಬುದಾಗಿ ತಿಳಿದು ಬರುತ್ತದೆ. ಅವರು ಸೌದಿಯ ರಿಯಾಲ್ಸ್ಗಳನ್ನು ಹೀಗೆ ಬಾಳೆಹಣ್ಣಿನಲ್ಲಿ ಸಾಗಿಸುತ್ತಿದ್ದರು ಎಂದು ಆ ವರದಿ ತಿಳಿಸಿತ್ತು. ಆದರೆ ಈ ವಿಡಿಯೋಗಳನ್ನು ಈಗ ಡಿಲಿಟ್ ಮಾಡಲಾಗಿದೆ.
ಇಷ್ಟೆಲ್ಲ ಅಂಶಗಳಿಂದ ತಿಳಿಯುವುದೇನೆಂದರೆ ಈ ಹಣ ದೆಹಲಿ ಹಿಂಸಾಚಾರಕ್ಕೆ ಬಳಸಿದ್ದಲ್ಲ. ಅದಕ್ಕಿಂತ ಮುಂಚೆ ನಡೆದ ಕ್ರೈಂ ಕೃತ್ಯಗಳಲ್ಲಿ ಈ ಪ್ರಕಣವನ್ನು ವರದಿ ಮಾಡಲಾಗಿತ್ತು. ಅಲ್ಲದೆ ಇದೂ 2 ವರ್ಷಕ್ಕೂ ಮುಂಚಿನದ್ದು. ಹಾಗಾಗಿ ದೆಹಲಿ ಹಿಂಸಾಚಾರಕ್ಕೂ, ಈ ಹಣ ಸಾಗಣೆಗೂ ಯಾವ ಸಂಬಂಧವೂ ಇಲ್ಲ. (ಏಜೆನ್ಸೀಸ್)