ಮೈಸೂರು: ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಮಾಜಿ ಸಚಿವ, ಬಿಜೆಪಿ ನಾಯಕ ಮುರುಗೇಶ ನಿರಾಣಿ ಅವರು ಮಂಗಳವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಮೈಸೂರು ಅರಮನೆಯಲ್ಲಿ ಭೇಟಿ ಮಾಡಿದರು.
ಮುಂದಿನ 20 ವರ್ಷಗಳ ಅವಧಿಗಾಗಿ 405 ಕೋಟಿ ರೂ.ಗೆ ಈ ಸಕ್ಕರೆ ಕಾರ್ಖಾನೆಯನ್ನು ತಾವು ಗುತ್ತಿಗೆ ಪಡೆದಿದ್ದು, ಅದರ ಪುನರಾರಂಭಕ್ಕೆ ಸಂಬಂಧಿಸಿದ ಸಮಾರಂಭಕ್ಕೆ ಆಹ್ವಾನಿಸಲು ರಾಜವಂಶಸ್ಥರ ಬಳಿ ಬಂದಿರುವುದಾಗಿ ನಿರಾಣಿ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ ಮೈಶುಗರ್ ಸೇರಿ 3 ಸಕ್ಕರೆ ಕಾರ್ಖಾನೆ ಖಾಸಗೀಕರಣ
ಇದೇ ವೇಳೆ ನಿರಾಣಿ ಗ್ರೂಪ್ನ ಕಾರ್ಯಚಟುವಟಿಕೆ, ಸಕ್ಕರೆ ವಹಿವಾಟು, ಸ್ಥಳೀಯ ರಾಜಕೀಯ ಮತ್ತಿತರ ವಿಷಯಗಳ ಕುರಿತು ಇಬ್ಬರೂ ಗಣ್ಯರ ನಡುವೆ ಚರ್ಚೆ ನಡೆಯಿತು ಎನ್ನಲಾಗಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆ ಇನ್ನು ಎರಡು ತಿಂಗಳಲ್ಲಿ ಪುನರಾರಂಭಿಸಲು ನಿರಾಣಿ ಗ್ರೂಪ್ ನಿರ್ಧರಿಸಿದೆ. ನಿರ್ದಿಷ್ಟ ದಿನಾಂಕ ಇನ್ನೂ ಅಂತಿಮವಾಗಿಲ್ಲ.