More

    ಗೌಡರ ಪುತ್ಥಳಿ ಸ್ಥಾಪಿಸಿ ರೈತನಿಂದ ನಿತ್ಯ ಪೂಜೆ

    ರಾಯಚೂರು: ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರ ಪುತ್ಥಳಿ ನಿರ್ವಿುಸಿ, ನಿತ್ಯ ಪೂಜೆ ಮಾಡುವ ಮೂಲಕ ರೈತನೊಬ್ಬ ಎಲ್ಲರಿಗೂ ಅಚ್ಚರಿ ಮೂಡುವಂತೆ ಮಾಡಿದ್ದಾನೆ. ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದ ರೈತ ಪ್ರಭುರೆಡ್ಡಿ ಕೊಳ್ಳೂರು ಈ ರೀತಿ ಅಭಿಮಾನ ಮೆರೆಯುತ್ತಿರುವ ರೈತ. ತಮ್ಮ ಜಮೀನಿನಲ್ಲಿ ಎಚ್​ಡಿಡಿ ಪುತ್ಥಳಿ ಸ್ಥಾಪಿಸಿ, ಅದರ ಮೇಲೆ ಭಾರತ ರತ್ನ, ಕನ್ನಡದ ಕಣ್ಮಣಿ, ದೇವದುರ್ಗ ತಾಲೂಕಿನ ದೊರೆ ಎಂದೆಲ್ಲ ಬಿರುದುಗಳನ್ನು ಬರೆಸಿದ್ದಾನೆ. ಕೃಷ್ಣಾ ನದಿ ನೀರನ್ನು ನಾರಾಯಣಪುರ ಬಲದಂಡೆ ಕಾಲುವೆ ಮೂಲಕ ಬರಡು ಭೂಮಿಗೆ ಹರಿಸಿದ್ದಕ್ಕಾಗಿ, ಅಭಿಮಾನದಿಂದ ಈ ರೀತಿ ಮಾಡುತ್ತಿದ್ದಾರೆ.

    ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು ಮಾಡಿ ಈ ಪುತ್ಥಳಿ ನಿರ್ವಿುಸಿರುವೆ. ನಾನು ರಾಜಕಾರಣಿಯಲ್ಲ. ರಾಜಕೀಯ ಬೇಕಾಗಿಲ್ಲ. 2017ರಲ್ಲಿ ಪುತ್ಥಳಿ ನಿರ್ಮಾಣ ಆರಂಭಿಸಲಾಗಿತ್ತು. ಅಡತಡೆಗಳಿಂದ ಪೂರ್ಣವಾಗಿರಲಿಲ್ಲ. ಈಗ ಕೈಗೂಡಿದೆ. ನಿತ್ಯ ಬೆಳಗ್ಗೆ ಹಾಗೂ ಸಂಜೆ ಸ್ವಚ್ಛಗೊಳಿಸುತ್ತೇನೆ. ಪೂಜಿಸುತ್ತೇನೆ.

    | ಪ್ರಭುರೆಡ್ಡಿ ಎಚ್​ಡಿಡಿ ಮೂರ್ತಿ ನಿರ್ವಿುಸಿರುವ ರೈತ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts