ಮಂಡ್ಯ: ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೀ ಹಾಕೀ ಸ್ಟಾರ್ಟ್ ಮಾಡಿದ್ದೇ ತಡ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಅನಾಹುತ ತಪ್ಪಿಸುವಷ್ಟರಲ್ಲೇ ಸ್ಕೂಟರ್ ಅಗ್ನಿಯ ಕೆನ್ನಾಲಿಗೆಗೆ ತುತ್ತಾದ ಘಟನೆ ಮಂಡ್ಯ ತಾಲೂಕಿನ ಮುತ್ತೆಗೆರೆ ಗ್ರಾಮದಲ್ಲಿ ಸಂಭವಿಸಿದೆ.
ಇದನ್ನೂ ಓದಿ: ಭಾರತಕ್ಕೆ ಒಟ್ಟಿಗೆ ಅಪ್ಪಳಿಸಲಿವೆ ಎರಡು ಸೈಕ್ಲೋನ್: ಇದು ಅಪರೂಪದ ವಿದ್ಯಾಮಾನ, ಹವಾಮಾನ ತಜ್ಞರ ಎಚ್ಚರಿಕೆ
ಎಂದಿನಂತೆ ಕೀ ಆನ್ ಮಾಡಿ ಸ್ಟಾರ್ಟ್ ಮಾಡುವಾಗ ಸ್ಕೂಟರ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಯನ್ನು ನಂದಿಸುವ ಪ್ರಯತ್ನಕ್ಕೆ ಮುಂದಾದರೂ ಕೂಡ ಇದು ಫಲಿಸಲಿಲ್ಲ. ಅಗ್ನಿಯ ಅವಘಡಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಕ್ಷಣಾರ್ಧದಲ್ಲಿ ಧಗಧಗನೆ ಉರಿದು ಹೋಗಿದೆ. ಸುಟ್ಟು ಹೋದ ಎಲೆಕ್ಟ್ರಿಕ್ ಸ್ಕೂಟರ್ ಚಂದ್ರಶೇಖರ್ ಎಂಬುವರಿಗೆ ಸೇರಿದ್ದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಚಕ್ಕಂದ ಬೇಡವೆಂದ ತಾಯಿಯನ್ನು ಬಾಯ್ ಫ್ರೆಂಡ್ ಜೊತೆ ಸೇರಿ ಕೊಂದ ಟೀನೇಜ್ ಪುತ್ರಿ!
ಮನೆಯಿಂದ ಬಸರಾಳು ಗ್ರಾಮಕ್ಕೆ ತೆರಳಲು ಸ್ಕೂಟರ್ ಸ್ಟಾರ್ಟ್ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಒಕಿನೊವಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾಗಿದ್ದು, ಘಟನೆಯನ್ನು ಪ್ರತ್ಯಕ್ಷ ಕಂಡ ಗ್ರಾಮಸ್ಥರು ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಈ ಪ್ರಕರಣ ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಚಕ್ಕಂದ ಬೇಡವೆಂದ ತಾಯಿಯನ್ನು ಬಾಯ್ ಫ್ರೆಂಡ್ ಜೊತೆ ಸೇರಿ ಕೊಂದ ಟೀನೇಜ್ ಪುತ್ರಿ!