More

    ಭೂಕಂಪ: 2 ಬಾರಿ ಕಂಪಿಸಿದ ಭೂಮಿ, ಶಬ್ದಕ್ಕೆ ಹೆದರಿ ಮನೆಯಿಂದ ಹೊರಗೆ ಓಡಿ ಬಂದ ಜನರು..

    ರಾಮನಗರ: ರಾಜ್ಯದ ಅಲ್ಲಲ್ಲಿ ಮತ್ತೆ ಮತ್ತೆ ಭೂಕಂಪ ಆಗುತ್ತಿರುವ ಪ್ರಕರಣ ವರದಿಯಾಗುತ್ತಿದ್ದು, ಇಂದು ರಾಜಧಾನಿ ಬೆಂಗಳೂರಿಗೆ ಹತ್ತಿರದ ಊರಲ್ಲೇ ಭೂಮಿ ಎರಡು ಸಲ ಕಂಪನಕ್ಕೆ ಒಳಗಾಗಿದ್ದು ನಡೆದಿದೆ. ಪರಿಣಾಮವಾಗಿ ಊರಿನ ಜನರು ಆತಂಕಕ್ಕೆ ಒಳಗಾಗಿದ್ದೂ ಕಂಡುಬಂದಿದೆ.

    ರಾಮನಗರದಲ್ಲಿ ಇಂದು ಸಂಜೆ 5:40 ಹಾಗೂ 7:15ರ ಸುಮಾರಿಗೆ ಎರಡು ಬಾರಿ ಕಂಪಿಸಿದ ಅನುಭವವಾಗಿದೆ. ರಾಮನಗರ ತಾಲೂಕಿನ ಬೆಜ್ಜರಹಳ್ಳಿ ಕಟ್ಟೆಯಲ್ಲಿ ಈ ಕಂಪನ ಆಗಿರುವುದು ಗಮನಕ್ಕೆ ಬಂದಿದೆ ಎಂದು ಸ್ಥಳೀಯರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

    ಕಂಪನದ ಜತೆಗೆ ಶಬ್ದ ಕೂಡ ಹೊರಹೊಮ್ಮಿದ್ದು, ಶಬ್ದಕ್ಕೆ ಹೆದರಿದ ಜನರು ಮನೆಯಿಂದ ಹೊರಗೆ ಓಡಿ ಬಂದು ಆತಂಕದಲ್ಲಿರುವುದು ಕಂಡುಬಂದಿದೆ. ಆದರೆ ಈ ಭೂಕಂಪನದ ಕುರಿತು ರಿಕ್ಟರ್ ಮಾಪಕದಲ್ಲಿ ಯಾವುದೇ ಕಂಪನ ದಾಖಲಾಗಿಲ್ಲ ಎಂದು ಹೇಳಲಾಗಿದೆ.

    ವಿಜಯಪುರ ಜಿಲ್ಲೆಯಲ್ಲಿ ಪುನಃ ಭೂಕಂಪ; ಜನರಲ್ಲಿ ಏರಿತು ಚಿಂತೆ, ಆತಂಕ..

    ಮದ್ವೆಯಾದ 3 ತಿಂಗಳ ಬಳಿಕ ಗೊತ್ತಾಯ್ತು ಆ ವಿಷ್ಯ!; ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ 52 ವರ್ಷದ ವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts