More

    ಕುಡಿದ ಮತ್ತಿನಲ್ಲಿ ಕೊಡಲಿ ಹಿಡಿದು ಶಾಲೆಗೆ ನುಗ್ಗಿದ ವ್ಯಕ್ತಿ; ಮುಂದೇನಾಯ್ತು?

    ಉತ್ತರಪ್ರದೇಶ: ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಕೊಡಲಿ ಹಿಡಿದು ಶಾಲೆಯೊಳಗೆ ನುಗ್ಗಿ, ಶಾಲೆಯ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡಿರುವ ಘಟನೆ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ವರದಿಯಾಗಿದೆ.

    ಇದನ್ನೂ ಓದಿ: ಕಚೇರಿಗೆ ಟೀ ಬರಲಿಲ್ಲ.. ಬೀದಿಬದಿ ಚಹಾ ಮಾರ್ತಿದ್ದ ವ್ಯಾಪಾರಿಗೆ ನೋಟಿಸ್​ ಕೊಟ್ಟ ಅಧಿಕಾರಿಗಳು

    ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣಕ್ಕೆ ನುಗ್ಗಿದ ವ್ಯಕ್ತಿ, ಕೊಡಲಿ ಹಿಡಿದು ಬಂದದ್ದನ್ನು ಕಂಡ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಸಂಪೂರ್ಣ ಘಟನೆಯನ್ನು ಸ್ಥಳೀಯರೊಬ್ಬರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಶಾಲೆಯ ಮೈದಾನದಲ್ಲಿ ಅಳವಡಿಸಲಾಗಿದ್ದ ನೀರಿನ ಪಂಪ್​ ಅನ್ನು ಕೊಡಲಿಯಿಂದ ಧ್ವಂಸಗೊಳಿಸಿದ ಕುಡುಕ, ಕೆಲ ಸಮಯ ಸ್ಥಳೀಯರನ್ನು ಭಯಭೀತರನ್ನಾಗಿ ಮಾಡಿದ್ದಾನೆ.

    ಈ ಘಟನೆಯಿಂದ ಭಯಭೀತರಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಮೂರು ದಿನಗಳು ಕಳೆದರೂ ಶಾಲೆಗೆ ಹಾಜರಾಗಿಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ಜಿಲ್ಲಾ ಶಿಕ್ಷಣಾಧಿಕಾರಿ ಪ್ರದೀಪ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಶಿವಪ್ರಸಾದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸುಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ,(ಏಜೆನ್ಸೀಸ್).

    ರಾಮ್ ಚರಣ್ ನನ್ನ ಸ್ವಂತ ಮಗನಂತೆ: ನಿರ್ದೇಶಕ ಸಮುದ್ರಕನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts