ಹಾವೇರಿ: ಡ್ರಗ್ಸ್ ಕೇಸ್ನಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಲಮಾಣಿಯನ್ನು ಸಿಸಿಬಿ ಬಂಧಿಸಿದ್ದು, ಈ ಕುರಿತು ‘ದಿಗ್ವಿಜಯ ನ್ಯೂಸ್’ಗೆ ರುದ್ರಪ್ಪ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
‘ರಾಣೇಬೆನ್ನೂರಲ್ಲೇ ಬಿಎ ಓದಿದ ಮಗ ಮನೆಯಲ್ಲಿ ನಮ್ಮ ಜತೆಯೇ ಇದ್ದ. ಬಿಎ ಪಾಸ್ ಆದ ನಂತರ ಎಲ್ಎಲ್ಬಿ ಅಡ್ಮಿಷನ್ ಆಗಬೇಕು, ಕಾಲೇಜಿಗೆ ಹೋಗಬೇಕು ಎಂದು ರಾಣೇಬೆನ್ನೂರಿಗೆ ಬಂದಿದ್ದ. ನಮ್ಮ ಮನೆಗೆ ಯಾವುದೋ ಒಂದು ಪಾಕೇಟ್ನಲ್ಲಿ ಗಾಂಜಾ ಪೋಸ್ಟ್ ಬಂದಿದೆ. ಹಾಗಾಗಿ ಗೋವಾದಿಂದ ನನ್ನ ಮಗನನ್ನು ಕರೆದುಕೊಂಡು ಬಂದಿದ್ದಾರೆ. ನನ್ನ ಮಗನ ಜತೆ ನಾಲ್ಕೈದು ಜನರಿದ್ದಾರೆ…’ ಎಂದು ರುದ್ರಪ್ಪ ಲಮಾಣಿ ಹೇಳಿದರು.
‘ಈಗ ತನಿಖೆ ನಡೆಯುತ್ತಿದೆ. ನ್ಯಾಯಾಲಯ ಏನ್ ಮಾಡುತ್ತೋ ಅದಕ್ಕೆ ನಾವು ತಯಾರಿದ್ದೇವೆ. ನಮಗೇನೂ ಈ ಬಗ್ಗೆ ಗೊತ್ತಿಲ್ಲ. ಮಗ ಮನೇಲಿ ಇರ್ತಾ ಇದ್ದಾ.. ವಿರೋಧ ಪಕ್ಷದವರು ಏನೇನೋ ಮಾತಾಡಿದ್ದಾರೆ. ನಾನೇನು ಪ್ರತಿಕ್ರಿಯೆ ಕೊಡಲ್ಲ. ಅವರಿಗೆ ದೇವರು ಒಳ್ಳೇದು ಮಾಡಲಿ. ಮಕ್ಕಳು ಈ ರೀತಿ ಆಗಲಿ ಅಂತಾ ಯಾರೂ ಬಯಸಲ್ಲ. ಅವರಿಗೂ ಮಕ್ಕಳು ಇದಾರೆ.. ದೇವರು ನೋಡಿಕೊಳ್ತಾನೆ… ಈ ಬಗ್ಗೆ ನಾನೇನು ಹೆಚ್ಚು ಹೇಳಲ್ಲ ಎಂದು ರುದ್ರಪ್ಪ ಲಮಾಣಿ ಹೇಳಿದರು.
‘ರುದ್ರಪ್ಪ ಲಮಾಣಿಯ ಇತಿಹಾಸವೇ ಕ್ರಿಮಿನಲ್’ ಎಂದಿದ್ದ ಶಾಸಕ ನೆಹರು ಓಲೇಕಾರ್ ಮಾತಿಗೆ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ ರುದ್ರಪ್ಪ, ಅವರಿಗೂ ಮಕ್ಕಳಿದ್ದಾರೆ. ರಾಜಕಾರಣವೇ ಬೇರೆ, ಮಕ್ಕಳೇ ಬೇರೆ. ಈ ಬಗ್ಗೆ ನೋಡಿಕೊಳ್ಳಲು ಕಾನೂನಿದೆ ಎಂದರು.
https://www.vijayavani.net/drug-case-nehru-olekar-v-s-rudrappa-lamani/
ವಾಟ್ಸ್ಆ್ಯಪ್ ವಿಡಿಯೋ ಕರೆ ಮಾಡಿದ್ದ ಯುವತಿ ಬೆತ್ತಲಾಗಿ ನಿಂತಿದ್ದಳು! ಮುಂದೆ ಆಗಿದ್ದೆಲ್ಲವೂ ಅವಾಂತರ