ಬೆಂಗಳೂರು: ಡ್ರಗ್ಸ್ ಕೇಸ್ ಸಂಬಂಧ ಮಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡುತ್ತಿದ್ದಂತೆ ನಿರೂಪಕಿ ಅನುಶ್ರೀ ಅವರು ಮಾಜಿ ಮುಖ್ಯಮಂತ್ರಿ, ಮಾಜಿ ಸಿಎಂ ಪುತ್ರ ಸೇರಿ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಫೋನ್ ಮಾಡಿದ್ದರು ಎಂಬ ಸುದ್ದಿ ಶುಕ್ರವಾರ ಹರಿದಾಡಿತ್ತು.
ಅನುಶ್ರೀ ಪ್ರಕರಣದಲ್ಲಿ ‘ಮಾಜಿ ಸಿಎಂ’ ಪದಬಳಕೆ ಬಗ್ಗೆ ಶನಿವಾರ ಕೆಂಡಾಮಂಡಲವಾದ ಎಚ್.ಡಿ. ಕುಮಾರಸ್ವಾಮಿ, ”ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವ ನಾನು. ಮಾಜಿ ಮುಖ್ಯಮಂತ್ರಿಗಳಲ್ಲಿ ನಾನು, ಸಿದ್ದರಾಮಯ್ಯ, ಎಸ್ಎಂಕೆ, ಮೊಯ್ಲಿ, ಜಗದೀಶ ಶೆಟ್ಟರ್, ಡಿವಿಎಸ್ ಇನ್ನೂ ಬದುಕಿದ್ದೇವೆ. ಆ ಹೆಣ್ಣು ಮಗಳು(ಆ್ಯಂಕರ್ ಅನುಶ್ರೀ) ಯಾವ ಮಾಜಿ ಸಿಎಂ ಜತೆ ಮಾತನಾಡಿದ್ದಾರೆ ಎಂದು ಬಹಿರಂಗವಾಗಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿರಿ ಬಂಧನ ಭೀತಿಯಲ್ಲಿ ತನಗೆ ಕರೊನಾ ಇದೆಯೆಂದು ಅನುಶ್ರೀ ಡ್ರಾಮ ಮಾಡ್ತಾರಂತೆ!
”ಡ್ರಗ್ಸ್ ವಿಚಾರ ಹಳ್ಳ ಹಿಡಿಯುತ್ತೆ ಎಂದು ನಾನು ಮೊದಲೇ ಹೇಳಿದ್ದೆ. ದಿನಕ್ಕೊಂದು ಹೆಸರು ಹೊರ ಬರ್ತಿದೆ. ಇದನ್ನು ಸರ್ಕಾರವೇ ಸೃಷ್ಟಿಸುತ್ತಿದೆಯೋ ಅಥವಾ ಬೇರೆ ಯಾರಾದರೂ ಮಾಡ್ತಿದ್ದಾರೋ ಗೊತ್ತಾಗಬೇಕು. ಟಿವಿ ಆ್ಯಂಕರ್ ಒಬ್ಬರ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಮಾಜಿ ಸಿಎಂ ಒತ್ತಡ ಇದೆ ಎನ್ನಲಾಗುತ್ತಿದೆ. ಯಾರು ಆ ಹೆಣ್ಣು ಮಗಳು? ಅನುಶ್ರೀ ಅಂತಾ ಅಲ್ವಾ..! ಅವರ ಕಾಲ್ ಲಿಸ್ಟ್ನಲ್ಲಿ ಮಾಜಿ ಸಿಎಂ ಜತೆ ಮಾತನಾಡಿರುವ ವರದಿಗಳು ಬರ್ತಿವೆ. ಆ ಮಾಜಿ ಸಿಎಂ ಯಾರು? ಯಾವ ಮಾಜಿ ಸಿಎಂ ಮಗನ ಹೆಸರು ಇದೆ ಎಂಬುದು ಜನರಿಗೆ ಗೊತ್ತಾಗಲಿ. ಸರ್ಕಾರ ಇದನ್ನು ಹೊರ ತರಬೇಕು. ಈ ಬಗ್ಗೆ ಸಿಎಂ ಮತ್ತು ಗೃಹ ಸಚಿವರಿಬ್ಬರಿಗೂ ಪತ್ರ ಬರೆಯುತ್ತೇನೆ” ಎಂದು ಕುಮಾರಸ್ವಾಮಿ ಹೇಳಿದರು.
”ಡ್ರಗ್ಸ್ ಕೇಸ್ ಸಂಬಂಧ ಸಿಸಿಬಿ ನೋಟಿಸ್ ನೀಡುತ್ತಿದ್ದಂತೆ ಅನುಶ್ರೀ ಅವರು ರಾಜ್ಯದ ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿದ್ದರು ಎಂಬ ಮಾಹಿತಿಯನ್ನು ವರದಿಗಾರನಿಗೆ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್ ಎಂಬುವವರು ಕೊಟ್ಟಿದ್ದಾರೆ ಎನ್ನಲಾಗಿದೆ. ಅವರನ್ನು ಶನಿವಾರ ಬೆಳಗ್ಗೆ ಟ್ರಾನ್ಸ್ಫರ್ ಮಾಡಲಾಗಿತ್ತು. ಈ ಅಧಿಕಾರಿಯನ್ನು ವಿಚಾರಣೆ ಮಾಡಿ, ಆ ಮಾಜಿ ಸಿಎಂ ಯಾರೆಂದು ಬಾಯಿಬಿಡಿಸಿ. ಒತ್ತಡ ತಂದ ಮಾಜಿ ಸಿಎಂ ವಿರುದ್ಧ ಕ್ರಮ ತೆಗೆದುಕೊಳ್ಳಿ” ಎಂದು ಆಗ್ರಹಿಸಿದರು.
VIDEO| ರೌಡಿಗಳಿಂದ ಸರ್ಕಲ್ ಇನ್ಸ್ಪೆಕ್ಟರ್ಗೆ ಹೂವಿನ ಅಭಿಷೇಕ! ಸಿಪಿಐ-ಸರ್ಕಾರದ ವಿರುದ್ಧ ಮಾಜಿ ಸಚಿವ ವಾಗ್ದಾಳಿ