More

    ಸಮಾನತೆಯ ಹರಿಹಾರ ಅಂಬೇಡ್ಕರ್

    ಹುಮನಾಬಾದ್: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದಿಸಿದ ನ್ಯಾಯ ಮತ್ತು ಸಮಾನತೆ ಇಡೀ ಮನುಕುಲಕ್ಕೆ ದಾರಿ ದೀಪವಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

    ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ನಿಮಿತ್ತ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಮನುಕುಲದ ಒಳಿತಿಗಾಗಿ ಹೋರಾಡಿದ ಡಾ. ಅಂಬೇಡ್ಕರ್‌ರವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ದೇಶಕ್ಕೆ ಮಹತ್ತರವಾದ ಕೊಡುಗೆ ನೀಡಲು ಮುಂದಾಗಬೇಕು ಎಂದು ಹೇಳಿದರು.

    ಮಾಜಿ ಶಾಸಕ ಸುಭಾಷ ಕಲ್ಲೂರ, ಅಂಬೇಡ್ಕರ್ ನಿಗಮ ಮಂಡಳಿ ಮಾಜಿ ನಿರ್ದೇಶಕ ಬಸವರಾಜ ಆರ್ಯ, ಪುರಸಭೆ ಸದಸ್ಯ ಸುನೀಲ ಪಾಟೀಲï, ಜಯಂತಿ ಉತ್ಸವದ ಅಧ್ಯಕ್ಷ ಲಕ್ಷ್ಮೀಪುತ್ರ ಮಳಾಗೆ, ಉಪಾಧ್ಯಕ್ಷ ಕಾನಿಫನಾಥ ಜಾನವೀರ, ಸಂಜೀವಕುಮಾರ ಗರ್ಜೆ, ಪ್ರಮುಖರಾದ ಮನೋಜಕುಮಾರ ಜಾನವೀರ, ಕರಣ ಜಾನವೀರ, ಶಿವಪುತ್ರ ಮಾಳಗೆ, ಪ್ರೇಮಕುಮಾರ ಬಸನೂರೆ, ಓಂಕಾರ ಜಂಜೀರ, ಪ್ರೇಮಕುಮಾರ ಜಮಗಿ, ಧರ್ಮರಾಯ ಘಾಂಗ್ರೆ, ರವಿ ಹೊಸ್ಸಳ್ಳಿ ಸಂತೋಷ ಪಾಟೀಲ್, ವೈಜಿನಾಥ ಪಾಟೀಲ್, ಮಲ್ಲಿಕಾರ್ಜುನ ಸೀಗಿ, ಪ್ರಭಾಕರ ನಾಗರಾಳೆ, ನಾರಾಯಣ ರಾಂಪುರೆ, ಗಿರೀಶ ತುಂಬಾ, ಮಧುಕರ ಹೀಲಾಲಪುರೆ, ವಿನಾಯಕ ಮಂಕೋಜಿ, ಕಿಶೋರ ನಟ್ಟಿ, ಸಂಜು ವಾಡೇಕರ್, ಸುನೀಲ ಪತ್ರಿ, ಗುಲಾಮ್ ಅಹ್ಮದ್, ಶಿವರಾಜ ರಾಜೋಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts