More

    ನೆಲಕ್ಕುರುಳಿದ ವಿದ್ಯುತ್ ಕಂಬ

    ನರಗುಂದ: ಕಳೆದೊಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಗೆ ಪಟ್ಟಣದ ದಂಡಾಪುರ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ವಿದ್ಯುತ್ ಕಂಬ ಮುರಿದು ಬಿದ್ದಿದೆ.

    ಪಟ್ಟಣದ ಅಂಬೇಡ್ಕರ್ ನಗರ, ದಂಡಾಪುರ, ಸೇವಾಲಾಲ್‌ನಗರ, ಕೊರವರ ಓಣಿ, ಕುರುಬಗೇರಿ, ಹಗೇದಕಟ್ಟಿ ಓಣಿ, ಸದವತ್ತಿ ರೋಡ್ ಮುಂತಾದ ಪ್ರದೇಶಗಳಲ್ಲಿನ ಬೀದಿ ದೀಪಗಳು ಬೆಳಗುತ್ತಿಲ್ಲ. ಇದರಿಂದ ಸಂಪೂರ್ಣ ಕತ್ತರಲು ಆವರಿಸಿಕೊಂಡಿದೆ. ಜಿಟಿಜಿಟಿ ಮಳೆಯಲ್ಲಿ ಸಾರ್ವಜನಿಕರು ಸಂಚರಿಸುತ್ತಿದ್ದು ನರಕಯಾತನೆ ಅನುಭವಿಸುವಂತಾಗಿದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ದೂರುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಹೆಸ್ಕಾಂ ಸೆಕ್ಷೆನ್ ಅಧಿಕಾರಿ ನಿಂಗರಾಜ ಬ್ಯಾಲಹುಣಸಿ, ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ವಿದ್ಯುತ್ ಕಂಬ ಮುರಿದು ವಯರ್‌ಗಳು ತುಂಡಾಗಿವೆ. ದುರಸ್ತಿ ಕಾರ್ಯಕ್ಕೆ ನಿರಂತರವಾಗಿ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ. ಹೀಗಾಗಿ ಕೆಲ ಬಡಾವಣೆಗಳಲ್ಲಿನ ಬೀದಿದೀಪಗಳು ನಾಲ್ಕು ದಿನಗಳಿಂದ ಉರಿಯುತ್ತಿಲ್ಲ. ಮಳೆ ನಿಂತ ಕೂಡಲೇ ಹೊಸ ವಿದ್ಯುತ್ ಕಂಬ ಅಳವಡಿಸಿ ಸರಿಪಡಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts