ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬೀದಿ ನಾಯಿಗಳ ಉಪಟಳ ಮಿತಿ ಮೀರಿದ್ದು, ರಸ್ತೆಯಲ್ಲಿ ನಿರ್ಭಯವಾಗಿ ಓಡಾಡುವುದು ಕಷ್ಟಕರವಾಗಿದೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕೆಂಗೇರಿ ಉಪನಗರದ ಬಂಡೇಮಠ ಬಳಿಯ ದೊಡ್ಡಮ್ಮ ದೇವಾಲಯ ಹಿಂಭಾಗದಲ್ಲಿ ಇಂತದ್ದೇ ಅವಘಡ ನಡೆದಿದ್ದು, ಅದೃಷ್ಟವಶಾತ್ ಬಾಲಕ ನಾಯಿ ದಾಳಿಯಿಂದ ಪಾರಾಗಿದ್ದಾನೆ. ಇದಕ್ಕೆ ಸಂಬಂಧಪಟ್ಟ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಂಗೇರಿ ಉಪನಗರದ ಬಂಡೇಮಠ ಬಳಿಯ ದೊಡ್ಡಮ್ಮ ದೇವಾಲಯ ಹಿಂಭಾಗದಲ್ಲಿ ಬಾಲಕನ ಮೇಲೆರಗಲು ಹೊಂಚು ಹಾಕಿದ ನಾಯಿ ದಂಡು: ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ#DogAttack #Bengaluru #BBMP #KengeriTown #DogAttackonBoy pic.twitter.com/Z7vvuzPII5
— Vijayavani (@VVani4U) February 7, 2020