ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಿಯಾ ಚಕ್ರವರ್ತಿ ಮತ್ತವರ ಕುಟುಂಬದ ವಿರುದ್ಧ ದೂರು ದಾಖಲಾಗಿದೆ ವಿಚಾರಣೆ ಎದುರಿಸುತ್ತಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಸುಶಾಂತ್ ಅವರದ್ದು ಆತ್ಮಹತ್ಯೆ ಅಲ್ಲ ಅದೊಂದು ಕೊಲೆ ಎಂದು ಆರೋಪ ಮಾಡಲಾಗುತ್ತಿದೆ. ಈ ನಡುವೆ ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ಮಾಡಿದವರಿಗೆ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ನಿರ್ಮಾಣ ಹಂತದ ಮನೆಗೆ ‘ಡಿ ಬಾಸ್’ ಎಂದು ಹೆಸರಿಟ್ಟ ದರ್ಶನ್ ಅಭಿಮಾನಿ
ಈ ಹಿಂದೆ ಸುಶಾಂತ್ ಸಾವಿನ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಆ ವೈದ್ಯರ ತಂಡದ ಪೂರ್ತಿ ವಿವರ ಬಹಿರಂಗವಾಗಿತ್ತು. ಫೋನ್ ನಂಬರ್ ಸಹ ಅದರಲ್ಲಿದ್ದವು. ಆ ಫೋನ್ ನಂಬರ್ಗಳನ್ನೇ ಬಳಸಿಕೊಂಡು ಕೆಲವರು ನೇರವಾಗಿ ವೈದ್ಯರಿಗೆ ಫೋನ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಸೂಪರ್ ಸ್ಟಾರ್ಗೆ ರಾಕಿಂಗ್ ಸ್ಟಾರ್ ಧ್ವನಿ…
ಐವರು ವೈದ್ಯರೊಂದಿಗೆ ಅನುಚಿತವಾಗಿ ಮಾತನಾಡುತ್ತಿರುವ ಕಿಡಿಗೇಡಿಗಳು, ಲೈಸನ್ಸ್ ರದ್ದು ಮಾಡುವ ಹೆದರಿಕೆವೊಡ್ಡುತ್ತಿದ್ದಾರೆ. ಕೊಲೆ ಬೆದರಿಕೆ ಇದು ವೈದರ ಆತಂಕಕ್ಕೆ ಕಾರಣವಾಗಿದ್ದು, ರಕ್ಷಣೆ ಕೋರಿದ್ದಾರೆ. ಸುಶಾಂತ್ ವಿಚಾರದಲ್ಲಿ ವೈದ್ಯರು ಕೆಲ ವಿಚಾರಗಳನ್ನು ಗೌಪ್ಯವಾಗಿ ಇರಿಸುತ್ತಿದ್ದಾರೆ ಎಂಬ ವದಂತಿ ಹರಿದಾಡಿತೋ ಅಂದಿನಿಂದ ಕಿರುಕುಳ ಹೆಚ್ಚಾಗಿದೆಯಂತೆ. (ಏಜೆನ್ಸೀಸ್)
ಸುಶಾಂತ್ ಸಿಂಗ್ ರಜಪೂತ್ ಕೇಸ್ ಸಿಬಿಐಗೆ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು